ಮೈಸೂರು: ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿಯಾದ ಘಟನೆ ಮಹಾರಾಷ್ಟ್ರದ ಬಾಂದ್ರಾ ಕಣಿವೆ ಬಳಿ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಅಶ್ವಾರೋಹಿ ಕ್ರೀಡಾ ಕೂಟದಲ್ಲಿ ಮೈಸೂರಿನ ಅಶ್ವಾರೋಹಿ ಅಧಿಕಾರಿಗಳು ಭಾಗಿಯಾಗಿದ್ದರು. ಬಿಹಾರದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಮುಗಿಸಿ ಮೈಸೂರಿಗೆ ಬರುವ ವೇಳೆ ಈ ಅಪಘಾತ ನಡೆದಿದೆ. ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಜೀಪು ಪಲ್ಟಿಯಾಗಿದೆ.
ಜೀಪಿನಲ್ಲಿದ್ದ ಮೌಟೆಂಡ್ ಎಸಿಪಿ ಸೇರಿದಂತೆ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಜೀಪಿನಿಂದ ಹೊರಬರಲಾಗದೆ ನರಳಾಡಿದ್ದು, ಕಾರಿನ ಗಾಜು ಒಡೆದು ಮೌಟೆಂಡ್ ಪೊಲೀಸರು ಹೊರಬಂದಿದ್ದಾರೆ. ಘಟನೆಯಲ್ಲಿ ನಾಲ್ವರಿಗೂ ಸಣ್ಣಪುಟ್ಟ ಪ್ರಮಾಣದ ಗಾಯಗಳಾಗಿವೆ.
ಸ್ಥಳೀಯ ಪೊಲೀಸರ ಸಹಾಯದಿಂದ ಜೀಪು ಮೇಲಕ್ಕೆತ್ತಲಾಗಿದೆ.