ಬೆಂಗಳೂರು: ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್ ವರ್ಗಾವಣೆಗೆ ರೊಟೇಶನ್ ನಿಯಮ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ (Session) ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ (BJP) ತುಳಿಸಿ ಮುನಿರಾಜುಗೌಡ ಸಬ್ ರಿಜಿಸ್ಟರ್ ವರ್ಗಾವಣೆ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಸಬ್ ರಿಜಿಸ್ಟರ್ಗಳನ್ನ ವರ್ಗಾವಣೆಗೆ ರೊಟೇಶನ್ ಮಾದರಿ ನಿಯಮ ಜಾರಿ ಮಾಡುವ ಚಿಂತನೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಮುಂದ್ರಾಕ ಶುಲ್ಕ ಹೆಚ್ಚಳ ಇಲ್ಲ, ಜಮೀನು ಮೌಲ್ಯ ಪರಿಷ್ಕರಣೆ: ಕೃಷ್ಣಭೈರೇಗೌಡ
ಈಗಾಗಲೇ ಎಲ್ಲೋ ಇದ್ದ ಬೆಳಗಾವಿ ಸೇರಿದಂತೆ ಬೇರೆ ಜಿಲ್ಲೆ ಸಬ್ ರಿಜಿಸ್ಟರ್ಗಳನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಅವರು ನನ್ನ ಆದೇಶದ ವಿರುದ್ದ ಕೆಎಟಿಗೆ ಹೋಗಿದ್ದಾರೆ. ಅವರು ಹೋಗಲಿ, ಆದರೂ ವರ್ಗಾವಣೆಗೆ ಯಾವುದೇ ಸಿಂಡಿಕೇಟ್ ಇಲ್ಲದಂತೆ ಕ್ರಮವಹಿಸುತ್ತೇವೆ. ಇದಕ್ಕೆ ಬೇಕಾದ ನಿಯಮ ಜಾರಿಗೆ ಕ್ರಮವಹಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಡಬಲ್ ಮರ್ಡರ್ ಬಳಿಕ ಹೋಟೆಲ್ ರೂಂನಲ್ಲಿ ತಣ್ಣಗೆ ಎಣ್ಣೆ ಪಾರ್ಟಿ – ಫೆಲಿಕ್ಸ್ ಸೇರಿ ಮೂವರು ಲಾಕ್
Web Stories