ನಾನು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಜೆ.ಸಿ ಮಾಧುಸ್ವಾಮಿ

Public TV
1 Min Read
madhuswamy

ತುಮಕೂರು: ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ನಾನು ನನ್ನ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆಯ ಸರ್ಕಾರ ಸಿಗಲಿ ಎನ್ನುವ ಅಪೇಕ್ಷೆ ನನ್ನದು. ಈ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆಯದಾಗುತ್ತದೆ ಎಂದರೆ ಸರ್ವ ತ್ಯಾಗಕ್ಕೂ ಸಿದ್ಧ. ಬೇಕಾದರೆ ಶಾಸಕ ಸ್ಥಾನನೂ ಬಿಡುತ್ತೇನೆ. ಅಲ್ಲದೇ ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಇನ್ನಷ್ಟು ಹರ್ಷವಾಗಲಿದೆ ಎಂದರು.

BJP

ಮಾರ್ಚ 2ರಿಂದ ಮಾರ್ಚ್ ಅಂತ್ಯದವರೆಗೆ ವಿಧಾನಸಭಾ ಅಧಿವೇಶನ ನಿಗದಿಯಾಗಿದ್ದು, ಮಾರ್ಚ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲಿದ್ದಾರೆ. ಅಲ್ಲದೆ ಈ ಬಾರಿ ಯಾವುದೇ ಬಿಲ್ ಇದ್ದರೂ ಆರಂಭದಲ್ಲೇ ಮಂಡನೆ ಮಾಡಿ, ಕೆಲ ದಿನ ಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಇದರಿಂದ ಬಿಲ್‍ನ್ನು ಓದಿಕೊಂಡು ಬರಲು ಶಾಸಕರುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *