ಧಾರವಾಡ: ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಗರದ ಉಣಕಲ್ ಕ್ರಾಸ್ನಲ್ಲಿ ನಡೆದಿದೆ.
ಪ್ರವೀಣ್ ನವಲಗುಂದ ಎಂಬವರ ಮನೆಯಲ್ಲಿದ್ದ ಪಟಾಕಿ ಬಾಕ್ಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪಟಾಕಿ ಸಿಡಿದ್ದಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಹೊತ್ತಿ ಉರಿದಿವೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನೇ ಆವರಿಸಿ ಧಗಧಗನೆ ಉರಿದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ರಾತ್ರಿಯಿಡೀ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಈ ಬಾರಿಯ ದೀಪಾವಳಿ ಸುಮಾರು 40ಕ್ಕೂ ಹೆಚ್ಚು ಮಕ್ಕಳ ಬದುಕನ್ನ ಕತ್ತಲು ಮಾಡಿದೆ. ಶುಕ್ರವಾರ ರಾತ್ರಿ ಸುಮಾರು 14 ಜನ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಂಡಿದ್ದಾರೆ. ಚಾಮರಾಜಪೇಟೆಯ ಸಿದ್ದರಾಜು ರಾಕೆಟ್ ಹಚ್ಚಲು ಹೋಗಿ ಅದೇ ಈತನಿಗೆ ತಿರುಗುಬಾಣವಾಗಿದೆ. ಆಂಧ್ರ ಮೂಲದ ಸುಧಾಕರ್ ಪಟಾಕಿ ಹಚ್ಚಲು ಹೋಗಿ ತನ್ನ ಎಡಗಣ್ಣನ್ನ ಕಳೆದುಕೊಂಡಿದ್ದಾನೆ. ಸದ್ಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.