ಬೆಂಗಳೂರು: ಆರೋಗ್ಯದ ಸಮಸ್ಯೆಯಿಂದ ನನಗೆ ಲೋಕಸಭಾ ಚುನಾವಣೆಗೆ (General Elections 2024) ಸ್ಪರ್ಧಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನನ್ನ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಅಂತಿಮವಾಗಿ ನನ್ನ ಪತ್ನಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ ಎಂದು ದಾವಣಗೆರೆ (Davangere) ಸಂಸದ ಜಿ.ಎಂ ಸಿದ್ದೇಶ್ವರ್ (GM Siddeshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನನ್ನ ಪತ್ನಿಯ ಟಿಕೆಟ್ನಿಂದ ಇಡೀ ಜಿಲ್ಲೆಗೆ ಖುಷಿಯಾಗಿದೆ. ಅಲ್ಲೋ ಇಲ್ಲೋ ಒಬ್ಬರು ಮಾತಾಡ್ತಿದ್ದಾರೆ. ಅವರು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಚುನಾವಣೆ ಮಾಡುತ್ತೇನೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ನಾಟಕ ಅಷ್ಟೇ. ಎಂ.ಪಿ ರೇಣುಕಾಚಾರ್ಯ ನನ್ನ ಮಿತ್ರ ನಾನು ಅವನ ಜೊತೆ ಮಾತಾನಾಡುತ್ತೇನೆ. ನನ್ನ ಪತ್ನಿಯ ಗೆಲುವಿಗೆ ಅವನು ಸಹಕಾರ ಕೊಡುತ್ತಾನೆ ಎಂದಿದ್ದಾರೆ.