ಬೆಳಗಾವಿ: ಚಳಿಗಾಲದ ಅಧಿವೇಶನ ಸುವರ್ಣ ಸೌಧದಲ್ಲಿ ಆರಂಭವಾಗಿದ್ದು, ಇತ್ತ ಸದನದಲ್ಲಿ ಭಾಗವಹಿಸುವ ಶಾಸಕರು ಹಾಗೂ ಸಚಿವರಿಗಾಗಿ ಸುವರ್ಣಸೌಧದಲ್ಲಿ ಮೃಷ್ಟಾನ ಭೋಜನ ತಯಾರಾಗಿದೆ.
ಸದನ ವಿಶೇಷವಾಗಿ ಎರಡು ಬಗೆಯ ಪಲ್ಯ, ಕ್ಯಾಪ್ಸಿಕಂ ಮಸಾಲಾ, ಗ್ರೀನ್ ಬಟಾಣಾ ಮಸಾಲಾ, ಹೆಸರು ಬೇಳೆ ಪಾಯಸ ಸಿದ್ಧವಾಗಿದೆ. ಇದರೊಂದಿಗೆ ಸಾಂಬಾರ್, ಎರಡು ಬಗೆಯ ಅನ್ನ, ಮಸಾಲಾ ರೈಸ್ ಮತ್ತು ವೈಟ್ ರೈಸ್. ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಪುಡಿ, ಉಪ್ಪಿನ ಕಾಯಿ, ಹಪ್ಪಳವನ್ನ ಸಿದ್ಧಪಡಿಸಲಾಗುತ್ತಿದೆ.
- Advertisement 2
- Advertisement 3
ಅಧಿವೇಶನದಲ್ಲಿ 50 ಮಂದಿ ಅಡುಗೆಭಟ್ಟರು ಭೋಜನ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಮುಖವಾಗಿ ಈ ಬಾರಿ ಅಧಿವೇಶನದ ಭೋಜನ ಪಟ್ಟಿಯಲ್ಲಿ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಶೈಲಿಯ ಭೋಜನ ತಯಾರಿ ನಡೆದಿದೆ.
- Advertisement 4
ಕಳೆದ ಬಾರಿಯ ಅಧಿವೇಶನದಲ್ಲಿ ಆಹಾರದಲ್ಲಿ ವ್ಯತ್ಯಯವಾಗಿ ಶಾಸಕರಿಗೆ ತೊಂದರೆಯಾಗಿತ್ತು. ಇದರ ಪರಿಣಾಮವಾಗಿ ಈ ಬಾರಿ ಅಧಿವೇಶನಕ್ಕೂ ಮುನ್ನವೇ ಊಟದ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು ಹಾಗೂ ಬೆಂಬಲಿಗರು ಸರ್ಕಾರಿ ಹಣದಲ್ಲಿ ದುಂದು ವೆಚ್ಚ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಎಲ್ಲ ಶಾಸಕ, ಸಚಿವರಿಗೆ ಈ ಬಾರಿ ಬೆಳಗಾವಿಯಲ್ಲಿಯೇ ವಸತಿ ವ್ಯವಸ್ಥೆ ಮಾಡಲಾಗಿದ್ದು, ಅಧಿವೇಶನಕ್ಕಾಗಿ ಭಾವಹಿಸುವ ಶಾಸಕರು ಉಳಿದುಕೊಳ್ಳುವ ಹೋಟೆಲ್ ಗಳ ಹೆಚ್ಚುವರಿ ಊಟೋಪಹಾರದ ಮೊತ್ತವನ್ನು ಅವರೇ ಭರಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv