Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

Bengaluru City

ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

Public TV
Last updated: March 31, 2018 10:45 pm
Public TV
Share
6 Min Read
Amit Shah HR Ranganath FF
SHARE

– ಪಬ್ಲಿಕ್ ಟಿವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶೇಷ ಸಂದರ್ಶನ

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಣದಲ್ಲಿ ರಾಜಕೀಯ ನಾಯಕರು ತಂತ್ರ-ರಣತಂತ್ರಗಳನ್ನು ಹೂಡುತ್ತಿದ್ದಾರೆ. ಸದ್ಯ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ನಡೆಸಿದ ಸಂದರ್ಶನದಲ್ಲಿ ಅಮಿತ್ ಶಾ ಏನೇನ್ ಹೇಳಿದ್ರು..? ಬಿಜೆಪಿ ಅಧಿಕಾರಕ್ಕೇರಲು ಅಮಿತ್ ಶಾ ಪ್ಲ್ಯಾನ್ ಏನು.? ಕೈ ಸರ್ಕಾರ ವಿರುದ್ಧ ಯಾವ ರಣತಂತ್ರ ಹೆಣೆಯುತ್ತಿದ್ದಾರೆ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಆಗುತ್ತಾ ಎಂಬುದನ್ನು ವಿವರಿಸಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ವಿಚಾರಧಾರೆಯಲ್ಲಿ ಬದುಕುತ್ತೇನೆ. ಹಾಗೇ ನನ್ನ ವಿಚಾರಧಾರೆಯನ್ನ ದೇಶದ ತುಂಬಾ ಮುಟ್ಟಿಸಬೇಕು ಮತ್ತು ರಾಜಕಾರಣದಲ್ಲಿ ಇದ್ದರೂ ದೇಶದ ಬದಲಾವಣೆಗೆ ಕೆಲಸ ಮಾಡುತ್ತೇನೆ. ನಾನು ಹಾಕಿಕೊಂಡಿರುವ ಗುರಿಯನ್ನು ಮುಟ್ಟಬೇಕೆಂದರೆ ಜೀವನಪೂರ್ತಿ ಕೆಲಸ ಮಾಡಿದ್ರೂ ಕಡಿಮೆ ಅಂತಾ ಎಂಬುವುದು ನನ್ನ ಭಾವನೆ. ಇದನ್ನೂ ಓದಿ: ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

Amit Shah HR Ranganath 3

ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ: ಈ ಹಿಂದೆ ಕರ್ನಾಟಕದ ಜನತೆ ಒಂದು ಸಲ ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದರು. ಕೆಲವು ಘಟನೆಗಳನ್ನ ನಮಗೆ ನಿಭಾಯಿಸಲು ಆಗಲಿಲ್ಲ. ಈಗ ಬಿಜೆಪಿ ಬೇರೆಯದೇ ರೀತಿಯಲ್ಲಿ ಇಷ್ಟು ವರ್ಷಗಳಲ್ಲಿ ಅನುಭವ ಪಡೆದುಕೊಂಡಿದೆ. ಯಡಿಯೂರಪ್ಪ ಸರ್ಕಾರ ಪತನ ಆದ ನಂತರ ಬಿಜೆಪಿಯಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಸಾಕಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದೇವೆ. ಪ್ರತಿ 3 ತಿಂಗಳಿಗೊಮ್ಮೆ ಪಾರ್ಟಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಯುತ್ತೆ. ಗುರಿಗಳನ್ನು ನಿರ್ಧರಿಸಲಾಗುತ್ತೆ. ಗುರಿಗಳ ವಿಮರ್ಶೆ ಆಗುತ್ತೆ. ಸರ್ಕಾರದ ಬಗ್ಗೆ ಜನರಲ್ಲಿ ಪತ್ರಿಕೆಯಲ್ಲಿ ಬರುವ ವಿಮರ್ಶೆಗಳ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಇದರ ಆಧಾರದ ಮೇಲೆ ನಮ್ಮ ಸರ್ಕಾರದ ಆಡಳಿತವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತದೆ. ನನ್ನ ಪ್ರಕಾರ ಈಗ ಸಾಕಷ್ಟು ಬದಲಾವಣೆ ಆಗಿವೆ. ಈ ಬಾರಿ ನಾವು ಕರ್ನಾಟಕ ಜನತೆಯ ವಿಶ್ವಾಸಗಳಿಸಿ ಕರ್ನಾಟಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಇದರೊಂದಿಗೆ ಕರ್ನಾಟಕದಲ್ಲಿ ಒಂದು ದೊಡ್ಡ ಮಟ್ಟದ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ದಕ್ಷಿಣದಲ್ಲಿ ಬಿಜೆಪಿಗೆ ಒಳ್ಳೆಯ ಆಡಳಿತ ನಡೆಸಲು ವೇದಿಕೆಯಾಗಲಿದೆ. ಇದನ್ನೂ ಓದಿ: ಅಮಿತ್ ಶಾ ಸಂದರ್ಶನ: ಕೇಂದ್ರ ಸರ್ಕಾರ ಮಹದಾಯಿ ಸಭೆಯನ್ನು ಯಾಕೆ ಕರೆಯಲಿಲ್ಲ?

ಮಿಷನ್ 150 ಸಾಧ್ಯವಾಗುತ್ತಾ?: ನಾವು ಯಾವತ್ತೂ ಮ್ಯಾಜಿಕ್ ನಂಬರ್ 150 ಹೇಳಿಲ್ಲ. ನಾನು ಇಲ್ಲಿಯವರೆಗೆ ಹೆಚ್ಚು ಕಡಿಮೆ 140 ಕ್ಷೇತ್ರಗಳನ್ನು ಸುತ್ತಿದ್ದೇನೆ. ಏಪ್ರಿಲ್ 15-16ರ ಹೊತ್ತಿಗೆ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಗೊತ್ತಾಗುತ್ತೆ. ನಾನು ಹೋದಲ್ಲೆಲ್ಲಾ ಜನರ ಸ್ವಾಗತ, ಉತ್ಸಾಹ ನೋಡಿದ್ರೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಡಕೆ ಬೆಳಗಾರರಿರಬಹುದು, ತೆಂಗು ಬೆಳೆಗಾರರಿರಬಹುದು, ಕಾಫಿ ಬೆಳೆಗಾರರಿಬಹುದು, ದಲಿತ-ಹಿಂದುಳಿದವರಿಂದ ಹಿಡಿದು ಗ್ರಾಮೀಣ ಮತ್ತು ಪಟ್ಟಣ ಮತದಾರರು ಒಂದು ಬದಲಾವಣೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತದೆ. ಜನರು ಬದಲಾವಣೆ ಬಯಸಿದಲ್ಲಿ ಬಿಜೆಪಿ ಸರ್ಕಾರ ಬರೋದು ನಿಶ್ಚಿತ.

Amit Shah HR Ranganath 2

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸಂಪೂರ್ಣ ವಿಫಲವಾಗಿದೆ. ಓಲೈಕೆ ರಾಜಕಾರಣ ಮಾಡಲು ಹೊರಟಾಗ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಇಷ್ಟೊಂದು ಸಂಪನ್ಮೂಲ ಇದ್ದರೂ ಕೂಡ ಗ್ರಾಮೀಣ ಭಾಗದ ಅಭಿವೃದ್ಧಿ ಮಾಡಿಲ್ಲ. ಈಗಲೂ ಬಿಜೆಪಿ ಇರುವ 9 ರಾಜ್ಯಗಳಲ್ಲಿ 24 ಗಂಟೆ ವಿದ್ಯುತ್ ಇದೆ. ಮಧ್ಯಪ್ರದೇಶ, ಛತ್ತೀಸ್‍ಘಢ 24 ಗಂಟೆ ವಿದ್ಯುತ್ ಕೊಡುತ್ತೆ. ಹಾಗಾದ್ರೆ ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಂತ ದೊಡ್ಡ ನಗರದಲ್ಲಿ ಇಷ್ಟು ಆದಾಯ ಇದ್ದರೂ, ಬೇರೆ ಬೇರೆ ದೇಶಗಳ ಸಂಪರ್ಕ ಇದ್ದರೂ ಈ ಆದಾಯಗಳು ಹಳ್ಳಿಗಳ ಅಭಿವೃದ್ಧಿಗೆ ಏಕೆ ಬಳಕೆಯಾಗಲ್ಲಿಲ್ಲ. ಹಾಗಿದ್ದರೆ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವೇನು..? ಆದಾಯ ಮತ್ತು ಹಣದ ಸರಿಯಾದ ಪ್ರಮಾಣದ ಹಂಚಿಕೆ ಮಾಡಿ ಸರ್ವರಿಗೂ ಅಭಿವೃದ್ಧಿ ತಲುಪುವ ರೀತಿಯಲ್ಲಿ ಕೆಲಸ ಮಾಡುವುದೇ ಸರ್ಕಾರದ ಮುಖ್ಯ ಕರ್ತವ್ಯ. ಕರ್ನಾಟಕ ಮುಖ್ಯಮಂತ್ರಿ ನಮ್ಮ ಹತ್ತಿರ ದುಡ್ಡಿಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ ಅಂತಾ ಅಂದ್ರು.

ಜೆಡಿಎಸ್ ಜೊತೆ ನಾವು ಚುನಾವಣಾ ಹೊಂದಾಣಿಕೆಯನ್ನು ಮಾಡಿಲ್ಲ. ನಾವು ಪ್ರತಿಕ್ಷೇತ್ರ ಗೆಲ್ಲಲೇಬೇಕೆಂದು ಚುನಾವಣೆ ಎದುರಿಸಿ ಪೂರ್ಣಪ್ರಮಾಣದ ಸರ್ಕಾರವನ್ನು ರಚಿಸುತ್ತೇವೆ. ಒಂದೇ ಪಕ್ಷದ 24 ಕಾರ್ಯಕರ್ತರಲ್ಲಿ 22 ಕಾರ್ಯಕರ್ತರನ್ನು ಒಂದೇ ರೀತಿ ಹತ್ಯೆ ಮಾಡಿದ್ರೂ ಈವರೆಗೂ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಇದು ಕೂಡ ದೇಶದ ರಾಜಕಾರಣದಲ್ಲಿ ಹಿಂದೆಂದೂ ನಡೆಯದ ಘಟನೆ. ನನ್ನ ಪ್ರಕಾರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದ ಕುತಂತ್ರವನ್ನು ಮಾಡಿದ್ದಾರೆ. ಈ ಶಿಫಾರಸನ್ನು 2013ರಲ್ಲೂ ಯುಪಿಎ ಸರ್ಕಾರ ತಿರಸ್ಕರಿಸಿತ್ತು. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೂ ಲಿಂಗಾಯತ ದಲಿತರಿಗೆ ಮೀಸಲಾತಿ ಕೂಡ ಇರುವುದಿಲ್ಲ. ಇದನ್ನು ಸಿದ್ದರಾಮಯ್ಯ ಮರೆತಂತೆ ಕಾಣಿಸುತ್ತದೆ ಅಂತ ವ್ಯಂಗ್ಯ ಮಾಡಿದ್ರು. ಇದನ್ನೂ ಓದಿ: ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಹೇಗೆ ನೀಡಲಾಗುತ್ತೆ: ಅಮಿತ್ ಶಾ ತಿಳಿಸಿದ್ರು

Amit Shah HR Ranganath 4

ನೋಟ್‍ಬ್ಯಾನ್: ನೋಟ್‍ಬ್ಯಾನ್ ವಿಚಾರವನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಂಗ್ರೆಸ್ ಕಪ್ಪುಹಣದ ವಿರುದ್ಧವಾಗಿತ್ತು. 1967ರ ನಂತರ ಕಾಂಗ್ರೆಸ್ ದೇಶದ ರಾಜಕೀಯದಲ್ಲಿ ಕಪ್ಪುಹಣದ ಪರವಾಗಿತ್ತು. ಹಾಗಾಗಿ ಕಾಂಗ್ರೆಸ್ ಯಾವತ್ತಿಗೂ ಕಪ್ಪುಹಣದ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜಿಎಸ್‍ಟಿ ಅವರ ಅಧಿಕಾರಾವಧಿಯಲ್ಲೇ ಇತ್ತು. ಆದ್ರೆ ಅದಕ್ಕೆ ಸರ್ವಾನುಮತ ತರೋದ್ರಲ್ಲಿ ವಿಫಲವಾಗಿತ್ತು. ನಾವು ಸರ್ವಾನುಮತದಿಂದ ಅಂಗೀಕಾರಗೊಳಿಸಿದ್ದೇವೆ. ಜನರಿಗೆ ಅವರ ಮೇಲೆ ವಿಶ್ವಾಸ ಇರ್ಲಿಲ್ಲ. ಮೊದಲು 4% ಸಿಎಸ್‍ಟಿ ಇತ್ತು. ಅದನ್ನ ಇಳಿಸಿ 2% ಮಾಡಿದ್ರೂ ಆಗಿನ ಹಣಕಾಸು ಮಂತ್ರಿ ಚಿದಂಬರಂ ರಾಜ್ಯಗಳಿಗಾಗುವ ನಷ್ಟಗಳನ್ನು ಕೇಂದ್ರದಿಂದ ತುಂಬಿಕೊಡುತ್ತೇವೆ ಅಂತ ಮಾತು ಕೊಟ್ಟಿದ್ದರು. ಆದ್ರೆ ನಷ್ಟವನ್ನು ಭರಿಸುವ ಪ್ರಯತ್ನವನ್ನೂ ನಡೆಸಿಲ್ಲ. ನಾವು ಅದನ್ನ ಆಕ್ಟ್‍ನಲ್ಲಿ ಸೇರಿಸಿದೆವು. ಈಗ ಎಲ್ಲಾ ರಾಜ್ಯಗಳಿಗೆ ನಷ್ಟದ ಪ್ರಮಾಣ ಕೇಂದ್ರದಿಂದ ಹೋಗುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

ತ್ರಿವಳಿ ತಲಾಖ್: ನಾವು ಚುನಾವಣೆಗೋಸ್ಕರ ತಲಾಖ್ ವಿಚಾರವನ್ನು ತೆಗೆದುಕೊಂಡಿಲ್ಲ. ಇದು ಈ ದೇಶದ ಮುಸ್ಲಿಂ ಸೋದರಿಯರ ಅಧಿಕಾರ. ಸಂವಿಧಾನದಲ್ಲಿ ಸಮಾನತೆಯ ಅವಕಾಶ ಇದೆ. ಆದ್ರೆ ಇಷ್ಟು ವರ್ಷ ಅದನ್ನು ತುಳಿಯಲಾಗಿತ್ತು. ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಒಂದು ಸ್ಪಷ್ಟ ವಿಚಾರವನ್ನು ಇಟ್ಟಿತ್ತು. ನಾವು ಓಲೈಕೆ ರಾಜಕಾರಣ ಮಾಡಲ್ಲ. ಇದು ಮುಸ್ಲಿಂ ಮಹಿಳೆಯರ ಅಧಿಕಾರ. ಇದ್ರಲ್ಲಿ ನಾವು ಹೋರಾಡಿ ಗೆಲುವು ಸಾಧಿಸಿದ್ದೇವೆ.

Amit Shah HR Ranganath 5

ಗೌರಿ, ಕಲ್ಬುರ್ಗಿ ಹಂತಕರನ್ನು ಬಂಧಿಸುವಲ್ಲಿ ವಿಫಲ: ಕೃಷಿ ಪ್ರಗತಿ ಮಧ್ಯಪ್ರದೇಶದಲ್ಲಿ 16% ಇದೆ. ಗುಜರಾತ್‍ನಲ್ಲಿ 13% ಇದೆ. ರಾಜಸ್ಥಾನದಲ್ಲಿ 10% ಇದೆ. ಕರ್ನಾಟಕದಲ್ಲಿ ಕೃಷಿ ಪ್ರಗತಿ ಎಷ್ಟಿದೆ..? ಕೇವಲ 4%ಗಿಂತಲೂ ಕಡಿಮೆ. ನಾನು ಯಾವಾಗಲೂ ಸಕ್ರ್ಯೂಟ್ ಹೌಸ್‍ನಲ್ಲಿರುತ್ತಿದ್ದೆ. ಐದು ದಿನಗಳ ಹಿಂದೆ ನೀತಿ ಸಂಹಿತೆ ಇರ್ಲಿಲ್ಲ. ತಾಜ್‍ನಲ್ಲಿ ನಮ್ಮ ರಾಜ್ಯ ಘಟಕ ರೂಮ್ ವ್ಯವಸ್ಥೆ ಮಾಡಿತು. ಏಕೆ ಅಂತ ವಿಚಾರಿಸಿದಾಗ ಅಲ್ಲಿಂದ ಬಂದ್ರೆ 2 ಗಂಟೆ ತಡವಾಗುತ್ತೆ ಅನ್ನೋ ವಿಚಾರ ತಿಳೀತು. ಬೆಂಗಳೂರಿನ ಟ್ರಾಫಿಕ್ ಸ್ಥಿತಿ ಹೀಗಿದೆ. ಕಾನೂನು ಸುವ್ಯವಸ್ಥೆ ಹೇಗಿದೆ.? ಒಂದೇ ಪಕ್ಷದ 24 ಕಾರ್ಯಕರ್ತರ ಕೊಲೆ ಆಗಿದೆ. ಕಲ್ಬುರ್ಗಿ ಹತ್ಯೆಯಾಯ್ತು, ಗೌರಿ ಹತ್ಯೆಯಾಯ್ತು, ಇನ್ನೂ ಕೊಲೆಗಡುಕರನ್ನ ಹಿಡಿಯಲು ಸಾಧ್ಯವಾಗಿಲ್ಲ. ಇಂತಹ ದುರಾಡಳಿತ ಇರುವಂತ ರಾಜ್ಯವನ್ನು ನನ್ನ ಜೀವನದಲ್ಲೇ ನೋಡಿರ್ಲಿಲ್ಲ. ನನ್ನ ಹೇಳಿಕೆಯಲ್ಲಿ ಸ್ವಲ್ಪ ತಪ್ಪಾದರು ಇಲ್ಲಿಯ ನಾಯಕರು ತುಂಬಾ ಖುಷಿಪಡ್ತಾರೆ. ಮಂತ್ರಿಗಳು ಖುಷಿಯಾಗ್ತಾರೆ. ರಾಹುಲ್ ಟ್ವೀಟ್‍ಗಳನ್ನೂ ಮಾಡ್ತಾರೆ. ಕರ್ನಾಟಕದ ಸರ್ಕಾರದ ಭ್ರಷ್ಟಾಚಾರದ ವಿಚಾರ ಜನಸಾಮಾನ್ಯರ ಬಾಯಲ್ಲಿದೆ. ಭಾಷಣದಲ್ಲಿ ನಾನು ಭ್ರಷ್ಟಾಚಾರದ ಲಿಸ್ಟ್ ಹೇಳ್ತೇನೆ. ಕೆಲವೊಂದು ಭ್ರಷ್ಟಾಚಾರಗಳನ್ನು ಬಿಟ್ಟಿದ್ದೀರಿ ಅಂತ ನನಗೆ ವಾಟ್ಸಪ್ ಬರುತ್ತೆ ಅಂತಾ ಅಂದ್ರು. ಇದನ್ನೂ ಓದಿ: ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್

ದೇಶದಲ್ಲಿ 4 ಪ್ರಕಾರದ ಸರ್ಕಾರಗಳು: ಈ ದೇಶದಲ್ಲಿ 4 ಪ್ರಕಾರದ ಸರ್ಕಾರಗಳು ಇವೆ. ಒಂದು ಸಾಕಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ನಡೆಸಿದೆ. ಎರಡನೆಯದ್ದು ಕಮ್ಯುನಿಸ್ಟ್ ಸರ್ಕಾರ. ಮೂರನೆಯದು ಪ್ರಾದೇಶಿಕ ಪಕ್ಷಗಳ ಸರ್ಕಾರ. ನಾಲ್ಕನೆಯದು ಬಿಜೆಪಿ ಸರ್ಕಾರ. ಸಾಕಷ್ಟು ರಾಜ್ಯಗಳಲ್ಲಿ ಸರ್ಕಾರ ನಡೆಸಿದ್ದೇವೆ. ನಿಮ್ಮ ಚಾನೆಲ್‍ನಿಂದ ಒಂದು ರಿಸರ್ಚ್ ಮಾಡಿಸಿ ನೋಡಿ. ನಮ್ಮ ಸರ್ಕಾರ 300% ಎಲ್ಲಾ ಸರ್ಕಾರಗಳಿಗಿಂತಲೂ ಉತ್ತಮ ಸರ್ಕಾರ ಅನ್ನೋ ಅಭಿಪ್ರಾಯ ಬರುತ್ತದೆ. ಆಡಳಿತಾತ್ಮಕ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ 20 ಅಂಶಗಳ ಕಾರ್ಯಕ್ರಮದ ಸ್ಪರ್ಧೆ ಇತ್ತು. ಅದನ್ನು ನಿಲ್ಲಿಸಲಾಯ್ತು. ಯಾಕಂದ್ರೆ ಮೊದಲ ಏಳೂ ರಾಜ್ಯಗಳು ಬಿಜೆಪಿ ಆಡಳಿತದ ರಾಜ್ಯಗಳಾಗಿರ್ತಿದ್ದವು ಅಂತಾ ತಿಳಿಸಿದ್ರು. ಇದನ್ನೂ ಓದಿ : ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ?

ಕೊನೆಗೆ ಈ ಬಾರಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ರಾಜ್ಯದ ಜನತೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಇಷ್ಟಪಡುತ್ತಿದ್ದಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

TAGGED:Amit Shahbjpcongressjdskarnataka electionsmahadayiPublic TVಅಮಿತ್ ಶಾಕರ್ನಾಟಕ ಚುನಾವಣೆಕಾಂಗ್ರೆಸ್ಜೆಡಿಎಸ್ಪಬ್ಲಿಕ್ ಟಿವಿಬಿಜೆಪಿಮಹದಾಯಿ
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

karnataka High Court
Court

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

Public TV
By Public TV
14 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್‌ ಗೆಲ್ಲಿ

Public TV
By Public TV
49 minutes ago
Weather
Bengaluru City

ಬೆಂಗಳೂರು ಸೇರಿ ರಾಜ್ಯಾದ್ಯಂತ ಇನ್ನೊಂದು ವಾರ ಹೆಚ್ಚಾಗಲಿದೆ ಬಿಸಿಲು

Public TV
By Public TV
55 minutes ago
Bengaluru B.Tech Student Missing
Bengaluru City

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ

Public TV
By Public TV
2 hours ago
big bulletin 20 april 2026 part 1
Big Bulletin

ಬಿಗ್‌ ಬುಲೆಟಿನ್‌ 20 April 2026 ಭಾಗ-1

Public TV
By Public TV
2 hours ago
big bulletin 20 april 2026 part 2
Big Bulletin

ಬಿಗ್‌ ಬುಲೆಟಿನ್‌ 20 April 2026 ಭಾಗ-2

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?