ಬೆಂಗಳೂರು: ರಾಜಕೀಯ ವಲಯದಲ್ಲಿರೋ ಕೊಳೆ ತೆಗೆದು ಕಳೆ ತರುವ ಪ್ರಯತ್ನದಲ್ಲಿ ರಿಯಲ್ಸ್ಟಾರ್ ಉಪೇಂದ್ರ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಶನಿವಾರ ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಪ್ರಜಾಕೀಯ ಕಾನ್ಸೆಪ್ಟ್ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ರು.
ಉಪ್ಪಿ ಐಡಿಯಾಲಜಿಗೆ ಸಾಕ್ಷಿಯಾದ ಅವರ ಅಭಿಮಾನಿಗಳ ಪ್ರಶ್ನೆ, ಗೊಂದಲಕ್ಕೂ ಉತ್ತರಿಸಿದ್ರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅಲ್ಟಿಮೇಟ್ ಅನ್ನೋದನ್ನ ನಿರೂಪಿಸಲು ಪ್ರತಿಯೊಬ್ಬನೂ ಕಾರ್ಮಿಕನಾಗಿ ದುಡಿದ್ರೆ ಅಷ್ಟೇ ಸಾಕು. ಜನರ ಅಭಿಪ್ರಾಯಗಳಿಗಾಗಿ ಇಮೇಲ್ ಐಡಿ ಕೊಟ್ಟಿದ್ದೀನಿ. ಅವರಿಂದ ಬರೋ ಅಭಿಪ್ರಾಯ, ಸಲಹೆ ಸೂಚನೆಯೇ ಮುಂದಿನ ದಾರಿಯಾಗುತ್ತೆ ಅಂದ್ರು.
- Advertisement 2
2018ರ ಎಲೆಕ್ಷನ್ಗೆ ಅಭ್ಯರ್ಥಿಗಳನ್ನ ನಿಲ್ಲಿಸ್ತೀರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ನಾನಂತೂ ನಿಲ್ತೀನಿ. ನನ್ ಜೊತೆಗೇ ಬರೋರಿದ್ರೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಅಂತ ಹೇಳಿದ್ರು.
- Advertisement 3
ಇದನ್ನೂ ಓದಿ: ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ
- Advertisement 4
https://www.youtube.com/watch?v=bZaGWvf-YS8
https://www.youtube.com/watch?v=ZO-DYDHeKHM