ಚಿಕ್ಕೋಡಿ: ತನಗೆ ಎರಡು ಹೆಣ್ಣು ಮಕ್ಕಳಿವೆ ಎಂಬ ಭಾವನೆಯಿಂದ ತನ್ನ ತಂಗಿಯ 2 ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ನಡೆದಿದೆ.
2 ವರ್ಷದ ಕಾರ್ತಿಕ್ ಅಲಾಸೆ ಕೊಲೆಯಾದ ಮಗು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಶ್ರೀ ಅಲಾಸೆಯು ತನ್ನ ತಂಗಿಯ ಮಗುವನ್ನು ನೀರು ತುಂಬಿದ್ದ ಬ್ಯಾರಲ್ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆದರೆ ನನ್ನ ತಂಗಿಗೆ ಗಂಡು ಮಗು ಹುಟ್ಟಿದೆ ಎನ್ನುವ ಸ್ವಾರ್ಥದಿಂದ ಏನೂ ಅರಿಯದ ಮಗುವನ್ನು ನಿರ್ದಾಕ್ಷೀಣ್ಯವಾಗಿ ಹತ್ಯೆ ಮಾಡಿದ್ದಾಳೆ.
ಕೊಲೆಯ ಬಳಿಕ ಜಯಶ್ರೀಯು ಮನೆಯಲ್ಲಿದ್ದ ಹಣ ಹಾಗೂ ಒಡವೆ ಸಮೇತ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv