ಮಂಡ್ಯ: ಒಂದೇ ರೀತಿ ಬಾಗಿಲು ಮುರಿದು ಬೆಳ್ಳಂಬೆಳ್ಳಗೆ ಸರಣಿ ಕಳ್ಳತನ

Public TV
1 Min Read
MND KALLATANA COLLAGE

ಮಂಡ್ಯ: ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಈ ಕಳ್ಳತನ ನಡೆದಿದೆ. ನಾಗಮಂಗಲದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರೋ ಎಸ್‍ಎಲ್‍ಎನ್ ವೈನ್ ಸ್ಟೋರ್, ಪಟ್ಟಣದ ಟಿಬಿ ಸರ್ಕಲ್ ಬಳಿ ಇರೋ ಸುಜಾತ ವೈನ್ ಸ್ಟೋರ್ ಹಾಗೂ ಮೈಸೂರು ಮುಖ್ಯ ರಸ್ತೆಯಲ್ಲಿ ಇರೋ ಇಂಡಿಯನ್ ಗ್ಯಾಸ್ ಏಜೆನ್ಸಿಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

ಮೂರು ಕಡೆ ಒಂದೇ ರೀತಿ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ. ಕಳ್ಳರು ಜಾಕ್ ಗಳ ಸಹಾಯದಿಂದ ಬಾಗಿಲು ಮುರಿದಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳಕ್ಕೆ ನಾಗಮಂಗಲದ ಪಟ್ಟಣ ಠಾಣಾ ಪೊಲೀಸರು ಭೇಟಿ ನೀಡಿದ್ದು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.

MND KALLTHAN AV 1

MND KALLTHAN AV 3

MND KALLTHAN AV 4

Share This Article
Leave a Comment

Leave a Reply

Your email address will not be published. Required fields are marked *