ಬೆಂಗಳೂರು: ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಸ್ವಾಮೀಜಿಗಳ ಆಶಿರ್ವಾದ ಪಡೆಯೋದು, ಹೋಮ ಮಾಡಿಸೋದು, ಇಂತಹ ಹಲವು ಕೆಲಸಗಳನ್ನು ಆಗಾಗ ಮಾಡ್ತಾನೇ ಇರ್ತಾರೆ.
ಆದ್ರೆ ಇದೀಗ ದುನಿಯಾ ವಿಜಿ ದಂಪತಿ ದಿಗಂಬರ ಸ್ವಾಮೀಜಿಯ ಆಶೀರ್ವಾದ ಪಡೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ದುನಿಯಾ ವಿಜಿ ಹಾಗೂ ಅವರ ಪತ್ನಿ ಕೀರ್ತಿ ಕಲಬುರ್ಗಿ ಜಿಲ್ಲೆಯ ಶ್ರೀ ಶ್ರೀ ಶ್ರೀ ದತ್ತ ದಿಗಂಬರ ಅಭಿನವ ಬಾಲಯೋಗಿ ಶಂಕರಲಿಂಗ ಮಹಾರಾಜ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದುನಿಯಾ ವಿಜಿ ಅವರ ಪತ್ನಿ ಕೀರ್ತಿ ಕೂಡ ಫೋಟೋದಲ್ಲಿದ್ದಾರೆ.
ಈ ಸ್ವಾಮೀಜಿಯನ್ನ ದುನಿಯಾ ವಿಜಿ ನಂಬೋಕೆ ಏನು ಕಾರಣ ಅನ್ನೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.