ಕೋಲಾರ: ಕುಡಿದ ನಶೆಯಲ್ಲಿ ಕುಡುಕನೊಬ್ಬ ಮನೆಗಳ ಮೇಲ್ಛಾವಣಿ ಹಾಗೂ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಇರುದಯಂ ಕಾಲೋನಿಯಲ್ಲಿ ಸೋಮವಾರ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ಅದೇ ಕಾಲೋನಿಯ ನಿವಾಸಿ ಮಂಜುನಾಥ್ ಎಂಬಾತ 5 ಮನೆಗಳಲ್ಲಿ ಪಿಠೋಪಕರಣ, ಮೇಲ್ಛಾವಣಿಯನ್ನು ಕುಡುಕ ಧ್ವಂಸ ಮಾಡಿದ್ದಾನೆ. ಮಂಜುನಾಥ್ ಅಂದರೆ ಕಾಲೋನಿಯ ಜನರಿಗೆ ಒಂಥರಾ ಭಯ. ಕುಡಿದ ಮತ್ತಿನಲ್ಲಿ ಏನೇನು ಮಾಡ್ತಾನೋ ಎನ್ನುವ ಹೆದರಿಕೆ ಸ್ಥಳೀಯರಲ್ಲಿದೆ. ಹೀಗೆ ಕುಡಿದು ಕಾಲೋನಿ ತುಂಬಾ ಓಡಾಡೋ ಮಂಜುನಾಥ್ ಇಂದು ಸ್ಥಳೀಯರಿಗೆ ವಿಪರೀತ ತಲೆನೋವು ಕೊಟ್ಟಿದ್ದಾನೆ.
- Advertisement 2
- Advertisement 3
ಕುಡಿದ ನಶೆಯಲ್ಲಿ ಕಾಲೋನಿಯಲ್ಲಿದ್ದ ಸುಮಾರು 5 ಮನೆಗಳ ಮೇಲೆ ಹತ್ತಿ ಮೇಲ್ಛಾವಣಿಗೆ ಕಲ್ಲು ಹಾಗೂ ಹಂಚು ಎಸೆದು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೆ ಮನೆಗಳಲ್ಲಿದ್ದ ಪೀಠೋಪಕರಣವನ್ನು ಕೂಡ ಹಾಳು ಮಾಡಿದ್ದಾನೆ. ಈ ಕುಡುಕನ ಅವತಾರಕ್ಕೆ ಕಾಲೋನಿಯ ಮಹಿಳೆಯರು ಹಾಗೂ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಕೆಲವರು ಈತನ ಅವಾಂತರವನ್ನು ಮೊಬೈಲ್ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.
- Advertisement 4
ಈ ಘಟನೆ ಕುರಿತು ಅಂಡರ್ ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಡುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
https://youtu.be/VpJxEcj9F_w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv