ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಎಲ್ಲಾ ಕಡೆ ಭರದ ತಯಾರಿ ನಡೆದಿದೆ. ಬೆಳಗಾವಿ, ಚಿತ್ರದುರ್ಗ ಸೇರಿ ಹಲವೆಡೆ ಸಿದ್ದರಾಮಯ್ಯ ಬೆಂಬಲಿಗರು ದಾವಣಗೆರೆ ಕಡೆಗೆ ಹೊರಟು ನಿಂತಿದ್ದಾರೆ. ಕೆಲವು ನಾಯಕರು ಭಾಷಣದ ರಿಹರ್ಸಲ್ ಕೂಡ ನಡೆಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರ ಭಾಷಣದ ಅಂಶಗಳು ಲೀಕ್ ಆಗಿದೆ.
ಭಾಷಣದ ಪ್ರತಿಯನ್ನು ಡಿಕೆ ಶಿವಕುಮಾರ್ ಅವರ ಮಾಧ್ಯಮ ವಿಭಾಗ ವಾಟ್ಸಪ್ ಗ್ರೂಪ್ಗೆ ಹಾಕಿ ನಂತರ ಡಿಲೀಟ್ ಮಾಡಿದೆ. ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿಯೇ ಸಿಎಂ ಫೈಟ್ಗೆ ಬ್ರೇಕ್ ಹಾಕಲು ಡಿಕೆಶಿ ಮುಂದಾಗಿದ್ರಾ ಎಂಬ ಪ್ರಶ್ನೆ ಡಿಕೆಶಿಯ ಭಾಷಣದ ಸೋರಿಕೆಯಿಂದ ಏಳುತ್ತದೆ. ಇದನ್ನೂ ಓದಿ: Exclusive-ಚಂದನ್ ಹಲ್ಲೆಗೆ ನಾನು ನ್ಯಾಯ ಕೇಳುತ್ತೇನೆ : ನಟಿ, ಚಂದನ್ ಪತ್ನಿ ಕವಿತಾ ಗೌಡ
ಪಕ್ಷವನ್ನು ಅಧಿಕಾರಕ್ಕೆ ಮೊದಲು ಅಧಿಕಾರಕ್ಕೆ ತರುವ ಕೆಲಸ ಮಾಡೋಣ. ನಂತರ ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ ಎಂಬ ಅಂಶ ಡಿಕೆಶಿ ಭಾಷಣದಲ್ಲಿದೆ. ಅಲ್ಲದೇ, ಉತ್ತಮ ನಾಯಕನಾದವನು ಹೆಚ್ಚು ನಾಯಕರನ್ನು ಸೃಷ್ಟಿ ಮಾಡುತ್ತಾನೆ ಹೊರತು, ಹಿಂಬಾಲಕರನ್ನಲ್ಲ ಎಂಬ ರಾಜೀವ್ ಗಾಂಧಿಯ ಮಾತು ಡಿಕೆಶಿಯ ಭಾಷಣದಲ್ಲಿದೆ. ಮೂಲಕ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ಡಿಕೆಶಿ ತಿರುಗೇಟು ನೀಡಲು ತಂತ್ರ ರೂಪಿಸಿದ್ದಾರೆ ಎಂಬ ಮಾತು ಕೇಳಿಬಂದಿವೆ.
ಇದೇ ಹೊತ್ತಲ್ಲಿ ಅಮೃತಮಹೋತ್ಸವ ಸಮಿತಿ ಸಿದ್ದರಾಮಯ್ಯ ನಿವಾಸದಲ್ಲಿ ಅಂತಿಮ ಹಂತದ ಸಭೆ ನಡೆಸಿದೆ. ಸಿದ್ದರಾಮೋತ್ಸವಕ್ಕೆ ಎಂದಿನಂತೆ ಬಿಜೆಪಿ ಕಾಲೆಳೆಯುವ ಕೆಲಸ ಮಾಡಿದೆ.