– ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್
ಬೆಂಗಳೂರು: ಕನ್ನಡ ಚಿತ್ರರಂಗ ತಾರಾಮೇಳಕ್ಕೆ ಸಜ್ಜಾಗುತ್ತಿದೆ. 14 ವರ್ಷದ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಫುಲ್ ಫ್ಲೆಜ್ಡ್ ಆಗಿ ನಾಯಕನಟನಾಗಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ದಾಖಲೆ ಬರೆಯೋಕೆ ಸಜ್ಜಾಗುತ್ತಿದೆ.
ದಕ್ಷಿಣ ಭಾರತವೇ ತಿರುಗಿ ನೋಡುವ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸಜ್ಜಾಗುತ್ತಿದ್ದು, `ಅಂಬಿ ನಿಂಗ್ ವಯಸ್ಸಾಯ್ತೋ’ ಆಡಿಯೋ ರಿಲೀಸ್ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗ ಸೇರಿದಂತೆ ಟಾಲಿವುಡ್, ಕಾಲಿವುಡ್ ಚಿತ್ರರಂಗದ ಗಣ್ಯರು ಒಂದೆಡೆ ಸೇರಲಿದ್ದಾರೆ.
- Advertisement 2
- Advertisement 3
ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ಬಳಿಕ ಫುಲ್ ಫ್ಲೆಜ್ಡ್ ಹೀರೂ ಆಗಿದ್ದಾರೆ. ಹೀಗಾಗಿ ಅಂಬಿ ಅಭಿನಯಿಸಿರುವ ಚಿತ್ರದ ಆಡಿಯೋ ರಿಲೀಸ್ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮಾಡುವ ಯೋಜನೆಗೆ ಸಿದ್ಧವಾಗಿದೆ. ಈಗಾಗಲೇ ಚಿರಂಜೀವಿ, ರಜನಿಕಾಂತ್, ಧನುಶ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕರಿಗೆ ಆಹ್ವಾನ ಹೋಗಿದೆ ಎಂದು ತಿಳಿದುಬಂದಿದೆ.
- Advertisement 4
ಕನ್ನಡದ ಹೊಸ ನಟರಿಂದ ಹಿಡಿದು ಸ್ಟಾರ್ ನಟರೆಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಖುದ್ದು ಅಂಬರೀಶ್, ದರ್ಶನ್ ರನ್ನ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ. ಚಿತ್ರದಲ್ಲಿ ಸುದೀಪ್ ಕೂಡ ಒಬ್ಬ ಹೀರೋ ಆಗಿರುವುದರಿಂದ ಒಂದೇ ವೇದಿಕೆಯಲ್ಲಿ ಹಳೆಯ ಕುಚಿಕು ಗೆಳೆಯರನ್ನ ಮತ್ತೆ ಒಟ್ಟಿಗೆ ನೋಡುವ ಸುವರ್ಣಾವಕಾಶ ಅಭಿಮಾನಿಗಳ ಪಾಲಿಗೆ ಬರುವ ನಿರೀಕ್ಷೆ ಇದೆ.
ಹಿರಿಯ ನಟನಿಗೆ ಗೌರವ ಕೊಡೋದಕ್ಕಾಗಿ ಖುದ್ದು ಕಿಚ್ಚ ಸುದೀಪ್ ಅವರೇ ಈ ಅದ್ಧೂರಿ ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಏರ್ಪಡಿಸೋಕೆ ಮುಂದಾಗಿದ್ದಾರೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಎಲ್ಲಾ ತಾರೆಗಳ ಇರುವಿಕೆಯನ್ನು ನೋಡಿಕೊಂಡು ಕಾರ್ಯಕ್ರಮ ದಿನಾಂಕ ಫಿಕ್ಸ್ ಮಾಡಲಾಗುತ್ತದೆ ಎಂಬುದಾಗಿ ಸಿನಿ ಮೂಲಗಳಿಂದ ತಿಳಿದು ಬಂದಿದೆ.