ಬೆಂಗಳೂರು: ಆಪರೇಷನ್ ಕಮಲ ಕುರಿತ ತಮ್ಮ ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwar) ಭೇಟಿ ಮಾಡಿದ್ದು, ಇದೀಗ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್ ಅವರು, ಆಡಿಯೋ ನನ್ನದಲ್ಲ. ಅದು ಫೇಕ್ ಆಡಿಯೋ. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನನ್ನ ವಿರೋಧಿಗಳ ಪ್ಲ್ಯಾನ್ ಇದಾಗಿದ್ದು, ದಿನ ಬೆಳಗಾದರೆ ಹೀಗೆಲ್ಲ ಮಾತಾಡುತ್ತಾರೆ. ಕುಮಾರಸ್ವಾಮಿ (HD Kumaraswamy) ವಿರುದ್ಧ ನಾನು ಗೆಲ್ಲುವ ವಿಶ್ವಾಸ ಇದೆ. ಕುಮಾರಸ್ವಾಮಿ ಕಳೆದ 5 ವರ್ಷ ಏನೂ ಮಾಡಿಲ್ಲ. ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ ಎಂದು ತಿಳಿಸಿದರು.
ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸ್ಥಾನ ವಿಚಾರ ನನಗೆ ಗೊತ್ತಿಲ್ಲ. ನಾನು ಸಚಿವ ಆಗಬೇಕು ಅಂತ ಯಾವತ್ತೂ ವೈಯಕ್ತಿಕವಾಗಿ ಸಿಎಂ ಜತೆ ಮಾತಾಡಿಲ್ಲ. ಸಂಕ್ರಾಂತಿ ಬಳಿಕ ವಿಸ್ತರಣೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಮೇನಲ್ಲಿ ಚುನಾವಣೆ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಮಂತ್ರಿ ಸ್ಥಾನ ಕೇಳುತ್ತೇನೆ ಎಂದು ಹೇಳಿದರು.
ಸಿಪಿವೈ ಆಡಿಯೋದಲ್ಲಿ ಏನಿದೆ?:
ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಬೆಂಗಳೂರು ಗನ್ ಮಂಜು, ಡಾ. ಶ್ರೀನಿವಾಸ್ ಮೂರ್ತಿ ನೆಲಮಂಗಲ, ಅನ್ನದಾನಿ, ಡಿ.ಸಿ.ತಮ್ಮಣ್ಣ, ಮಂಡ್ಯ ಶ್ರೀನಿವಾಸ್, ಟಿ ನರಸೀಪುರ ಸಾರಾ ಮಹೇಶ್ ಯಾಕೆ ಸೋಲ್ತಾರೆ ಅಂತಾ ಆ ಮೇಲೆ ಹೇಳ್ತೀನಿ. ರಾಮನಗರ 3 ಅವರೆ ಒಂದು ಮೈನಸ್ ಕಟ್ ಮಾಡಿಕೊಳ್ತಿದ್ದೀನಿ. ಅದು ಯಾವುದಾದ್ರೂ ಆಗಬಹುದು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರೇ ಗೆಲ್ಲಬಹುದು ನಮ್ಮದೇನಿಲ್ಲ. ಎಷ್ಟಾಯ್ತು 12 ಆಯ್ತು. ಉತ್ತರ ಕರ್ನಾಟಕದಲ್ಲಿ 5 ಇದ್ರೂ ಅವರೇ ಶಾಸಕರು, ಅದ್ರಲ್ಲಿ ಈಗ ಮೂವರು ವಾಷ್ಔಟ್. ಉಳಿದರೋ ಇಬ್ಬರಲ್ಲಿ ಬಂಡಪ್ಪ ಕಾಶ್ಯಂಪೂರ್ ಹಾಗೂ ಇನ್ನೊಬ್ಬರು, ಇಬ್ರಲ್ಲಿ ಒಬ್ಬರಿಗೆ ಚಾನ್ಸ್ ಇದೆ. ಆದ್ರೂ ಎರಡು ಹಾಕ್ಕೊಂಡಿದ್ದೀನಿ. 15 ಆಯ್ತು. ಇನ್ನ ಮಧುಗಿರಿ ವೀರಭದ್ರಯ್ಯ, ಬೇಲೂರು ಲಿಂಗೇಶ್ ಈ ಸರಿ ಗೆಲ್ಲಲ್ಲ. ನಮ್ಮ ಜಿಲ್ಲಾಧ್ಯಕ್ಷ ಸುರೇಶ್ ಕಡಿಮೆ ಅಂತರದಲ್ಲಿ ಗೆಲ್ತಾನೆ. ಇದನ್ನೂ ಓದಿ: ಎಲ್ಲರ ಕಣ್ತಪ್ಪಿಸಿ ಸ್ಯಾಂಟ್ರೋ ರವಿ ಶಿಫ್ಟ್ – ವಿಐಪಿ ಗೇಟ್ನಲ್ಲಿ ಕರೆದೊಯ್ದ ಬಗ್ಗೆ ಹೆಚ್ಡಿಕೆ ಕಿಡಿ
ಚಿಂತಾಮಣಿಯಲ್ಲಿ ಸಖತ್ ಫೈಟ್ ಇದೆ. ರೆಡ್ಡಿ ವಿರುದ್ಧ ಅವನು ಔಟ್, ಸಕಲೇಶಪುರದಲ್ಲಿ ಕುಮಾರಸ್ವಾಮಿ ನಮ್ಮಿಂದ ಲಾಸ್ಟ್ ಟೈಮ್ ಗೆದ್ದಿದ್ದ, ಈ ಬಾರಿ ಒಳ್ಳೆ ಕ್ಯಾಂಡೇಟ್ ಹಾಕಿದ್ದೀವಿ ಅವನು ಔಟ್. ಒಟ್ಟು 25 ಜನ ಸೋಲ್ತಾರೆ. ಸಾ.ರಾ.ಮಹೇಶ್ ಯಾಕೆ ಸೋಲ್ತಾನೆ ಅಂದ್ರೆ, ಅವನು ಗೆದ್ದಿರೋದು ಕಡಿಮೆ ಅಂತರದಲ್ಲಿ, ಇಬ್ಬರೂ ಒಕ್ಕಲಿಗರಾಗ್ತಾರೆ ಕಾಂಗ್ರೆಸ್ಗೆ ಚಾನ್ಸ್ ಇದೆ. ಕಳೆದ ಬಾರಿ ನಮ್ಮ ಬಿಜೆಪಿಯಿಂದ ಹಾಕಿರಲಿಲ್ಲ. ಹೊಂದಾಣಿಕೆ ಮಾಡಿಕೊಂಡಿದ್ವಿ ನಾವು ದೇವೇಗೌಡರು. ಅವರು ಬೇನಾಮಿ ಕುಮಾರಸ್ವಾಮಿ ತರ ಇದಾರೆ.
ಜನಾಭಿಪ್ರಾಯದಿಂದ ಬಿಜೆಪಿ (BJP) ಸರ್ಕಾರ ಬರಲ್ಲ. ಆದ್ರೆ ನಾವು ಬಿಜೆಪಿ ಸರ್ಕಾರ ಮಾಡ್ತೀವಿ. ಮಾವಿನ ಹಣ್ಣು ಮರದಲ್ಲೇ ಹಣ್ಣಾಗೋದಕ್ಕೂ, ಕೆಮಿಕಲ್ ಹಾಕಿ ಹಣ್ಣು ಮಾಡೋದಕ್ಕೂ ವ್ಯತ್ಯಾಸಯಿದೆ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯಗೆ ಪುನಃ ಪಟ್ಟ ಕಟ್ಟೋಕೆ ದೊಡ್ಡ ದೊಡ್ಡ ಲೀಡರ್ಗಳಿಗೆ ಯಾರಿಗೂ ಇಷ್ಟ ಇಲ್ಲ ಎಂದು ವೈರಲ್ ಆದ ಆಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಹೃದಯಾಘಾತ – ಸಂಸದ ಸಂತೋಖ್ ಸಿಂಗ್ ಚೌಧರಿ ನಿಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k