ಮೈಸೂರು: ಶ್ರೀ ಕ್ಷೇತ್ರದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 103ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕೈ ಕೈ ಹಿಡಿದು ಜ್ಯೋತಿ ಬೆಳಗಿದ್ದಾರೆ.
ನಗರದ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿ, ಬಳಿಕ ಎಚ್.ಡಿ.ಕುಮಾರಸ್ವಾಮಿಗೆ ಮೇಣದ ಬತ್ತಿ ನೀಡಿ ಜ್ಯೋತಿ ಬೆಳಗಿಸುವಂತೆ ತಿಳಿಸಿದರು. ಆಗ ಕುಮಾರಸ್ವಾಮಿ ತಮ್ಮ ಪಕ್ಕದಲ್ಲಿಯೇ ನಿಂತಿದ್ದ ಯಡಿಯೂರಪ್ಪ ಅವರನ್ನು ಕರೆದು ನೀವು ಕೈ ಜೋಡಿಸಿ ಎಂದರು. ಆಗ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಿಬ್ಬರು ಸೇರಿ ಜ್ಯೋತಿ ಬೆಳಗಿದರು.
ಉದ್ಘಾಟನೆ ಬಳಿಕ, ಅಕ್ಕಪಕ್ಕದಲ್ಲಿ ಕುಳಿತ್ತಿದ್ದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ರಾಜಕೀಯ ವೈಷಮ್ಯ, ವಿರೋಧ ಮರೆತು ಕೆಲ ಹೊತ್ತು ಮಾತುಕತೆ ನಡೆಸಿದರು. ಇನ್ನು ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ಬಂದು ಯಡಿಯೂರಪ್ಪ ಅವರಿಗೆ ಚೀಟಿ ಕೊಟ್ಟು ಹೋಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv