ರಾಮನಗರ: ರಾಜಕೀಯ (Politics) ಜಂಜಾಟದ ನಡುವೆ ನಮ್ಮ ಕ್ಷೇತ್ರದ ಜನರಿಗೆ ಹಾಗೂ ನಮ್ಮ ಮನೆಗೆ ಟೈಂ ಕೊಡಲು ಆಗುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇನ್ನೇನು ಅಧಿವೇಶನಕ್ಕೆ ಹತ್ತು ದಿನ ಬೆಳಗಾವಿಗೆ (Belagavi) ಹೋಗಬೇಕು. ಹೀಗಾಗಿ ಜನರ ಕಷ್ಟ ಕೇಳಲು ಕನಕಪುರಕ್ಕೆ (Kanakapura) ಬಂದಿದ್ದೇನೆ. ಈಗಾಗಲೇ ಸಂಸದರು ಗ್ರಾ.ಪಂ ಮಟ್ಟದ ಜನಸಂಪರ್ಕ ಸಭೆ ನಡೆಸಿದ್ದಾರೆ. ಈ ಹಿಂದೆ ಪ್ರತಿ ಗ್ರಾಮಗಳಿಗೂ ಪ್ರವಾಸ ಮಾಡುತ್ತಿದ್ದೆ. ಕಳೆದ ಎರಡು ಅವಧಿಯಿಂದ ರಾಜ್ಯ ರಾಜಕೀಯ ಕೆಲಸ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರ ಪ್ರವಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇಂದು ಸಂಜೆಯವರೆಗೂ ಕನಕಪುರದಲ್ಲೇ ಇದ್ದು ಜನರ ಕಷ್ಟ-ಸುಖ ಕೇಳುತ್ತೇನೆ. ಗ್ರಾ.ಪಂ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈ ಬಗ್ಗೆ ರಾಜ್ಯವ್ಯಾಪಿ ಆದೇಶ ಜಾರಿ ಮಾಡಲಾಗುವುದು ಎಂದರು. ಇದನ್ನೂ ಓದಿ: ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೇರಿದೆ : ಬೇಳೂರು ಗೋಪಾಲಕೃಷ್ಣ
ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ಧತೆ ಮಾಡಿಕೊಳ್ಳುವ ವಿಚಾರದ ಕುರಿತು ಮಾತನಾಡಿ, ನಮ್ಮಲ್ಲಿ ತೆಂಗಿನ ನಾರಿನ ಒಳ್ಳೆಯ ಹಗ್ಗ ಸಿಗುತ್ತದೆ. ಅದನ್ನು ನಾವೇ ವಿರೋಧ ಪಕ್ಷಕ್ಕೆ ಕಳುಹಿಸುತ್ತೆವೆ. ನಮ್ಮನ್ನು ಅಧಿವೇಶನದಲ್ಲಿ ಅದರಿಂದಲೇ ಕಟ್ಟಿಹಾಕಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೀನು ಎಷ್ಟು ಟ್ಯಾಕ್ಸ್ ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್ ಗರಂ