ರಾಯಚೂರು: ಬೈಕ್ಗೆ (Bike) ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
ಜಿಲ್ಲೆಯ ಮಂತ್ರಾಲಯ ರಸ್ತೆಯ ಮಂಜರ್ಲಾ ಕ್ರಾಸ್ ಬಳಿ ಅಪಘಾತ (Accident) ನಡೆದಿದ್ದು, ಬಿಹಾರ (Bihar) ಮೂಲದ ಎಂಡಿ ಅಲ್ಲಾವುದ್ದೀನ್ (25) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವ ಸವಾರ ರಜಪೂತ್ ಬಿಟ್ಟು ಸಿಂಗ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಓವರ್ಟೇಕ್ ಅವಾಂತರದಿಂದ ಬೈಕ್ಗೆ ಟ್ರಕ್ ಡಿಕ್ಕಿ – ಇಬ್ಬರ ದುರ್ಮರಣ
ಕಮಲಾಪುರದಿಂದ ಗಿಲ್ಲೆಸುಗೂರು ಕ್ಯಾಂಪ್ಗೆ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಬೈಕ್ಗೆ ಡಿಕ್ಕಿ ಹೊಡೆದು ಅಪರಿಚಿತ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಲ್ಲು, ಚೂರಿ ಹಿಡಿದು ನಡುರಸ್ತೆಯಲ್ಲಿ ದಾಂಧಲೆ – ಸಿನಿಮೀಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು
Web Stories