ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ.
ಈ ಟೈಂ ಟೇಬಲ್ನೊಂದಿಗೆ ಮೌಖಿಕ ಆದೇಶ ಹೊರಡಿಸಿರುವ ನಳಿನ್, ವಾರಕ್ಕೊಂದು ಬಾರಿ ಎರಡು ಗಂಟೆ ಟೈಂ ಪಕ್ಷದ ಕಚೇರಿಗೆ ಬರಲೇಬೇಕು. ಜೊತೆಗೆ ಕಾರ್ಯಕರ್ತರ ಸಮಸ್ಯೆ ಆಲಿಸಲೇಬೇಕು ಎಂದು ಹೊಸ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಕಚೇರಿಗೆ ಬಂದು ಮುಕ್ತವಾಗಿ ಸಭೆಯಲ್ಲಿ ಭಾಗಿಯಾಗಬೇಕು. ವರಿಷ್ಠರ ಜೊತೆಗೆ ಹೊಸ ಸಚಿವರು ಸಹ ಕಾರ್ಯಕರ್ತರ ಸಮಸ್ಯೆ, ಅಹವಾಲು ಆಲಿಸಬೇಕು ಎಂದು ಆದೇಶ ಮಾಡಿದ್ದಾರಂತೆ. ಇಂದು ನಾರಾಯಣಗೌಡ ಕಚೇರಿಗೆ ಬರುತ್ತಿದ್ದ ಹಾಗೆ ಈ ಸೂಚನೆಯ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಾರಾಯಣ ಗೌಡ, ಪಕ್ಷದ ವರಿಷ್ಠರು ಈ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಮಗೂ ಮೌಖಿಕ ಆದೇಶ ಬಂದಿದೆ. ಇದನ್ನು ಪಾಲನೆ ಮಾಡುತ್ತೇವೆ ಎಂದರು.