ಬೆಂಗಳೂರು: ಮರದ ರೆಂಬೆ ಬಿದ್ದು ಬರೋಬ್ಬರಿ 702 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸ್ತಿದ್ದ 7 ವರ್ಷದ ಕಂದಮ್ಮನನ್ನು ಕೊನೆಗೂ ಉಳಿಸಿಕೊಳ್ಳಲು ಆಗಿಲ್ಲ.
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 2020 ಮಾರ್ಚ್ 11ರಂದು ಶಾಲಗೆ ತೆರಳ್ತಿದ್ದ ಬಾಲಕಿ ಪ್ರಿಶಾ ಮೇಲೆ ಮರದ ರೆಂಬೆ ಬಿದ್ದಿತ್ತು. ತಲೆಗೆ ತೀವ್ರ ಪೆಟ್ಟಾಗಿ ಪ್ರಿಶಾ ಕೋಮಾಗೆ ಜಾರಿದ್ದಳು. ಅಂದಿನಿಂದ ಬಾಲಕಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್ಐ
ದುರಾದೃಷ್ಟವಶಾತ್ ಬಾಲಕಿ ಇಂದು ಉಸಿರು ನಿಲ್ಲಿಸಿದ್ದಾಳೆ. ಮೃತ ಬಾಲಕಿ ತಂದೆ ರಾಜು ಮಾತನಾಡಿ, ಯಾವುದೇ ಕಾರಣಕ್ಕೂ ಒಣಗಿದ ಮರ, ರಸ್ತೆಗುಂಡಿ ಬಿಡಬೇಡಿ. ಎಲ್ಲರ ಪ್ರಾಣಕ್ಕೂ ಬೆಲೆ ಇದೆ ಅಂತ ಮನವಿ ಮಾಡಿಕೊಂಡಿದ್ದಾರೆ.