ಕೊಪ್ಪಳ: ಇಂದು ದೆಹಲಿಯಿಂದ ಗಲ್ಲಿಯವರೆಗೂ ಜನರು ಕೆಟ್ಟಿಲ್ಲ ಬದಲಿಗೆ ಲೀಡರ್ಗಳು ಕೆಟ್ಟಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಕೊಪ್ಪಳದಲ್ಲಿ ಕಿಡಿಕಾರಿದರು.
ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಲಿಮೆಂಟ್ ಹಾಗೂ ವಿಧಾನಸೌಧಗಳು ಕೆಟ್ಟುಹೋಗಿದೆ. ಇದರಿಂದಾಗಿ ಜನ ಕೆಟ್ಟಿದ್ದಾರೆ. ಎಲ್ಲಾ ಕಡೆ ಇಂದು ಹಣ ಅಥವಾ ಜಾತಿ ಇದ್ದವನೇ ಚುನಾವಣೆಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಹಣ ಹಾಗೂ ಜಾತಿ ಮುಂದೆ ವಿಚಾರವಂತರಿಗೆ ಅವಕಾಶ ಸಿಗದ ಪರಿಸ್ಥಿತಿ ಬಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಾಗ್ದಾಳಿ ನಡೆಸಿದರು.
ಗಣಿ ಸಚಿವ ಹಾಲಪ್ಪ ಆಚಾರ್ ಅವರನ್ನು ನಾನೇ ಆರ್ಡಿಸಿಸಿ ಅಧ್ಯಕ್ಷ ಮಾಡಿದ್ದೆ. ನನಗೆ ಸಹಕಾರ ಕ್ಷೇತ್ರದಲ್ಲಿ ಏನೂ ಗೊತ್ತಿರಲಿಲ್ಲ. ಹೀಗಾಗಿ ನಾನು ಹಾಲಪ್ಪನನ್ನು ಅಧ್ಯಕ್ಷ ಮಾಡಿದ್ದೆ. ಆದರೆ ಹಾಲಪ್ಪ ಆಚಾರ್ ಎಲ್ಲೂ ನನ್ನ ಹೆಸರು ಹೇಳಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ
ಅನೇಕರನ್ನು ಎದುರು ಹಾಕಿಕೊಂಡು ಹಾಲಪ್ಪನನ್ನು ಅಧ್ಯಕ್ಷ ಮಾಡಿದ್ದೆ. ಆದರೆ ಹಾಲಪ್ಪ ಆಚಾರ್ ಸಚಿವರಾದ ಮೇಲೆ ಒಮ್ಮೆಯೂ ನಮ್ಮನ್ನು ನೆನಪಿಸಿಕೊಂಡಿಲ್ಲ. ಒಮ್ಮೊಮ್ಮೆ ನಾವು ಈ ರೀತಿ ಫೇಲ್ ಆಗುತ್ತೇವೆ. ಇಂತಹ ತಪ್ಪು ಜನರನ್ನು ಬೆಳಸುತ್ತೇವೆ. ಹಾಲಪ್ಪ ಹಣ್ಣಿನ ಗಿಡ ಆಗಲಿಲ್ಲ, ಜಾಲಿ ಗಿಡವಾದರು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟೆರೇಸ್ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆಗೆ ಯತ್ನ