ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಕುಪ್ಪೂರು ಮಠದ ಬಸವ ನಂದೀಶ್ವರ ಭವಿಷ್ಯ ಬರೆದಿದ್ದಾನೆ. ಅನ್ನದ ರಾಶಿ ಮೇಲೆ ಬಲಪಾದ ಸ್ಪರ್ಶಸಿ ಇನ್ಮುಂದೆ ಈ ನಾಡು ಸುಭಿಕ್ಷವಾಗಿರಲಿದೆ ಎಂದು ಭವಿಷ್ಯ ನುಡಿದಿದ್ದಾನೆ. ಈ ಭವಿಷ್ಯದಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.
ಕುಪ್ಪೂರು ಮಠಕ್ಕೆ ತನ್ನದೆ ಆದ ಪೌರಾಣಿಕ ಹಿನ್ನಲೆಯಿದೆ. ಈ ಮಠದಲ್ಲಿ ಸಾಕಲಾಗುವ ನಂದೀಶ್ವರ ಹೆಸರಿನ ಬಸವನಿಗೆ ದೈವಿ ಶಕ್ತಿ ಎಂದು ನಂಬಲಾಗಿದೆ. ಅದರಂತೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯಲ್ಲಿ ನಡೆಯುವ ಜಾತ್ರೋತ್ಸವದ ಅನ್ನ ಸಂತರ್ಪಣೆಯಲ್ಲಿ ಬಸವನ ನಂದೀಶ್ವರ ಭವಿಷ್ಯ ಬರೆಯುತ್ತಾ ಬಂದಿದ್ದಾನೆ.
- Advertisement 2
- Advertisement 3
ಬೃಹತ್ ಅನ್ನದ ರಾಶಿಯ ಮುಂದೆ ಬಸವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅನ್ನದ ರಾಶಿ ಮೇಲೆ ಪಾದ ಸ್ಪರ್ಶ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಾರೆ. ಭಕ್ತರ ಪ್ರಾರ್ಥನೆಗೆ ಓಗೊಟ್ಟು ನಂದೀಶ್ವರ ಪಾದ ಸ್ಪರ್ಶ ಮಾಡುತ್ತಾನೆ. ನಂದೀಶ್ವರನ ಪಾದ ಸ್ಪರ್ಶದಲ್ಲಿ ಒಂದು ವರ್ಷದ ಈ ನಾಡಿನ ಒಳಿತು, ಕೆಡುಕು ಅವಿತಿರುತ್ತದೆ. ಎಡಗಾಲಿಟ್ಟರೆ ಕೆಡುಕಾಗಲಿದೆ. ಬಲಗಾಲಿಟ್ಟರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಅನ್ನದ ರಾಶಿ ಮೇಲೆ ಬಸವ ನಂದೀಶ್ವರ ಬಲಗಾಲಿಟ್ಟಿದ್ದಾನೆ. ಹಾಗಾಗಿ ಈ ವರ್ಷ ನಾಡು ಸುಭಿಕ್ಷವಾಗಿರಲಿದೆ ಎಂಬ ಸಂದೇಶ ರವಾನೆಯಾಗಿದೆ.
- Advertisement 4
ಸಹಸ್ರಾರು ಭಕ್ತಾದಿಗಳು ಶ್ರೀಮಠದ ಜಾತ್ರೆಗೆ ಆಗಮಿಸುತ್ತಾರೆ. ಬಸವ ಭವಿಷ್ಯವನ್ನು ಆಲಿಸಲೇಂದೇ ಬರುತ್ತಾರೆ. ಕಳೆದ ವರ್ಷ ಅನ್ನದ ರಾಶಿ ಮೇಲೆ ಬಲಗಾಲು ಸ್ಪರ್ಶ ಮಾಡಿತ್ತು. ಹಾಗಾಗಿ ರಾಜ್ಯದಲ್ಲಿ ಮಳೆ-ಬೆಳೆ ಉತ್ತಮವಾಗಿರಲಿದೆ ಎಂಬ ನಂಬಿಕೆ. 2017 ಮತ್ತು 2016ರಂದು ಎಡಗಾಲು ಸ್ಪರ್ಶ ಮಾಡಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಆ ಎರಡು ವರ್ಷ ಭೀಕರ ಬರಗಾಲಕ್ಕೆ ತುತ್ತಾಗಿದ್ದನ್ನು ನಾವು ಗಮನಿಸಬಹುದಾಗಿದೆ. ಈ ವರ್ಷ ಮತ್ತೆ ಬಲಗಾಲಿನ ಸ್ಪರ್ಶ ಆಗಿರುವುದರಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.
ಬಸವನ ಭವಿಷ್ಯ ವೈಜ್ಷಾನಿಕವಾಗಿ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಇಲ್ಲಿನ ಭಕ್ತಾದಿಗಳು, ಗ್ರಾಮಸ್ಥರು ಹಿಂದಿನಿಂದಲು ಬಸವ ನಂದೀಶ್ವರನ ಭವಿಷ್ಯ ನಂಬಿಕೊಂಡು ಬಂದಿದ್ದಾರೆ.