ಲಕ್ನೋ: ರಾಜಕೀಯ ನಾಯಕನೊಬ್ಬ ಹುಡುಗನ ಮೂಗನ್ನು ಸಿಟ್ಟಿನಿಂದ ಕಚ್ಚಿದ ಘಟನೆ ಉತ್ತರಪ್ರದೇಶದ ಲಲಿತ್ಪುರದದಲ್ಲಿ ನಡೆದಿದೆ.
ಆರೋಪಿಯನ್ನು ಸಚಿನ್ ಸಾಹು ಎಂದು ಗುರುತಿಸಲಾಗಿದೆ. 16 ವರ್ಷದ ಹುಡುಗ ಸಚಿನ್ ಸಾಹು ಮನೆಯ ಮೇಲೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಸಚಿನ್ ಸಾಹು ಕ್ಷುಲ್ಲಕ ವಿಷಯಕ್ಕೆ ಹುಡುಗನ ಮೇಲೆ ಕೋಪ ಮಾಡಿಕೊಂಡು ಆತನ ಮೂಗನ್ನು ಕಚ್ಚಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್ ದಾಳಿ – ಕಂಟ್ರೋಲ್ ರೂಂಗೆ ಸಂದೇಶ
ಈ ಬಗ್ಗೆ ಎಸ್ಪಿ ಲಲಿತ್ಪುರ ನಿಖಿಲ್ ಪಾಠಕ್ ಮಾತನಾಡಿ, ಈ ಘಟನೆ ಸಂಬಂಧ ಆರೋಪಿಯನ್ನು ಸಚಿನ್ ಸಾಹು ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ