ಅಂಬುಲೆನ್ಸ್ ಇಂಜಿನ್‍ನಲ್ಲಿ ಅಡಗಿದ್ದ ನಾಗಪ್ಪ

Public TV
1 Min Read
DWD

ಧಾರವಾಡ: ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವೊಂದು ಅಡಗಿ ಕುಳಿತು ಆತಂಕ ಸೃಷ್ಟಿ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಟೋಲ್ ಗೇಟ್ ಬಳಿ ರಾತ್ರಿ ಅಂಬುಲೆನ್ಸ್ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವು ಆಶ್ರಯ ಪಡೆದು ಬಿಟ್ಟಿತ್ತು.

vlcsnap 2019 11 10 08h48m51s199

ಎಂದಿನಂತೆ ಬೆಳಗ್ಗೆ ಚಾಲಕ ಅಂಬುಲೆನ್ಸ್ ಹತ್ತಿದಾಗ ಹಾವು ಬುಸುಗುಡುವ ಸದ್ದು ಬಂದಿದೆ. ತಕ್ಷಣ ಅಂಬುಲೆನ್ಸ್ ಸಿಬ್ಬಂದಿ ಮತ್ತು ಸ್ಥಳೀಯರು ಉರಗ ಪ್ರೇಮಿ ಯಲ್ಲಪ್ಪ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಯಲ್ಲಪ್ಪ ಹಾವಿಗಾಗಿ ಅಂಬುಲೆನ್ಸ್ ಇಂಜಿನ್ ಬಳಿ ಹುಡುಕಾಡಿದ್ದಾರೆ.

ಸುಮಾರು ಸಮಯದ ನಂತರ ಐದು ಅಡಿ ಉದ್ದದ ಹಾವನ್ನು ಅಂಬುಲೆನ್ಸ್ ನಿಂದ ಸುರಕ್ಷಿತವಾಗಿ ಹೊರ ತೆಗೆದಿದ್ದು, ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *