ಚಿತ್ರದುರ್ಗ: ಮುರುಘಾಶ್ರೀ ಗಳ ವಿರುದ್ಧ ಪೋಕ್ಸೊ ಕೇಸ್ ಹಿನ್ನೆಲೆಯಲ್ಲಿ ಇದೀಗ ಶ್ರೀಗಳು ಮಠದಲ್ಲಿ ಕಾಣಿಸದೇ ಇರುವುದು ಭಕ್ತರು ಮೌನಕ್ಕೆ ಜಾರಿದ್ದಾರೆ.
ಶ್ರೀಗಳು ಮಠದಿಂದ ಹೊರಗೆ ತೆರಳಿದ್ದಾರೆ. ಆಡಳಿತಾಧಿಕಾರಿ ಜೊತೆ ರಾಜಿ ಸಂಧಾನ ವಿಫಲವಾಗಿದ್ದರಿಂದ ತಡರಾತ್ರಿ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿರುವ ಸಾಧ್ಯಗಳಿವೆ. ಈ ಹಿನ್ನೆಲೆಯಲ್ಲಿ ಮಠದ ಭಕ್ತರಲ್ಲಿ ಆತಂಕ ಮೂಡಿದೆ. ಅಲ್ಲದೆ ಭಕ್ತರು ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ: ಸಂತ್ರಸ್ತೆಯರ ಹೇಳಿಕೆ ಮೇಲೆ ನಿಂತಿದೆ ಮುರುಘಾ ಶ್ರೀಗಳ ಭವಿಷ್ಯ..?
ಇತ್ತ ಪ್ರಕರಣ ಸಂಬಂಧ ಇಂದು ಸಂತ್ರಸ್ತ ಬಾಲಕಿಯರು ಇಂದು ಬೆಳಗ್ಗೆ 10 ಗಂಟೆಗೆ ಜಡ್ಜ್ ಮುಂದೆ ಹಾಜರಾಗಲಿದ್ದಾರೆ. ನಿನ್ನೆ ಸಿಡಬ್ಲೂಸಿ ಕಮಿಟಿ ಎದುರು ಹೇಳಿಕೆ ದಾಖಲು ಮಾಡಲಾಗಿತ್ತು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿತ್ತು. ಸಂತ್ರಸ್ತ ಬಾಲಕಿಯರು ಮೈಸೂರಿನಲ್ಲಿ ಹೇಳಿದಂತೆ ಚಿತ್ರದುರ್ಗದ ಸಿಡಬ್ಲೂಸಿಮುಂದೆಯೂ ಅದೇ ಹೇಳಿಕೆ ನೀಡಿದ್ದಾರೆ.
ಇಂದು ಜಡ್ಜ್ ಮುಂದೆಯೂ ಸಂತ್ರಸ್ತೆಯರು ಯಥಾವತ್ತು ಹೇಳಿಕೆ ದಾಖಲಿಸಿದರೆ ಮುರುಘಾಶ್ರೀಗೆ ತೀವ್ರ ಸಂಕಷ್ಟ ಎದುರಾಗಲಿದೆ. ಪೊಲೀಸರು ಮುರುಘಾಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ.