Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿಗೆ ವರ್ಣರಂಜಿತ ತೆರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿಗೆ ವರ್ಣರಂಜಿತ ತೆರೆ

Bengaluru City

ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿಗೆ ವರ್ಣರಂಜಿತ ತೆರೆ

Public TV
Last updated: June 26, 2022 8:33 pm
Public TV
Share
4 Min Read
PTV 1
SHARE

ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಿಯ ವಿದ್ಯಾಪೀಠ ಎಜುಕೇಷನ್ ಎಕ್ಸ್‌ಪೋ  ಇಂದು ವರ್ಣರಂಜಿತ ತೆರೆ ಕಂಡಿದೆ. ಕೊನೆ ದಿನವೂ ನಾನಾ ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಆಮಿಸಿದ್ದರು.

03 9

ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದ ಎಕ್ಸ್‌ಪೋದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ವಿವಿಧ ಕ್ರೀಡೆಗಳಲ್ಲೂ ಉತ್ಸಾಹದಿಂದಲೇ ಪಾಲ್ಗೊಂಡು ಎಲೆಕ್ಟ್ರಿಕ್‌ ಬೈಕ್, ಬೈಸಿಕಲ್ ಬಂಪರ್ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂರು ದಿನಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರೊಂದಿಗೆ ಪೋಷಕರು ಎಕ್ಸ್ಪೋ ನಲ್ಲಿ ಭಾಗವಹಿಸಿ ಮಕ್ಕಳ ಶೈಕ್ಷಣಿಕ ಬದುಕಿಗೆ ಅಡಿಪಾಯ ಹಾಕಿಕೊಟ್ಟರು.

02 9

ಕೊನೆಯ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು, ಹಲವಾರು ಸವಾಲುಗಳ ನಡುವೆ ಈ ಶೈಕ್ಷಣಿಕ ಉತ್ಸವ ಯಶಸ್ವಿಯಾಗಿ ನಡೆದಿದೆ. 80ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದು, ಸಂಸ್ಥೆಯ ಪ್ರತಿನಿಧಿಗಳು ಪ್ರತಿಬಾರಿಯಂತೆ ಕೌಟುಂಬಿಕ ವಾತಾವರಣದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾಕ್ಕೂ ಮುಂಚೆ ಪಬ್ಲಿಕ್ ಟಿವಿ ಆಯೋಜಿಸಿದ್ದ ಶೈಕ್ಷಣಿಕ ಉತ್ಸವದಲ್ಲಿ 72 ಸಂಸ್ಥೆಗಳು ಭಾಗವಹಿಸಿದ್ದವು. ಈ ಬಾರಿ 80ಕ್ಕೂ ಹೆಚ್ಚು ಸಂಸ್ಥೆಗಳು ಶೈಕ್ಷಣಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಈ `ವಿದ್ಯಾಪೀಠ’ ಶೈಕ್ಷಣಿಕ ಉತ್ಸವವು, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಶೈಕ್ಷಣಿಕ ಉತ್ಸವವಾಗಿದೆ. ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

PUBLIC TV 02

ಈ ಉತ್ಸವವು ಮಕ್ಕಳು ಭಿನ್ನವಾದ ಶೈಕ್ಷಣಿಕ ಮಾಹಿತಿಯನ್ನು ತುಲನೆ ಮಾಡುವುದಕ್ಕೆ ಮಾರ್ಗದರ್ಶನ ನೀಡಿದೆ. ಇದೇ ತೀರ್ಮಾನ ಅಂದುಕೊಳ್ಳಬೇಕಿಲ್ಲ. ಇದು ಮಾರ್ಗದರ್ಶನದ ವೇದಿಕೆ. ಅದು ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲ ತಜ್ಞರು, ಪೋಷಕರು ಮತ್ತು ಮಕ್ಕಳ ಸಂಬಂಧದ ಬಗ್ಗೆಯೂ ಅದ್ಭುತ ಉಪನ್ಯಾಸಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

PTV

ಈ ಕಾಲದಲ್ಲಿ ಪೋಷಕರು ಉತ್ತಮ ಕಾಲೇಜು, ವಿಶ್ವವಿದ್ಯಾಯಲವನ್ನು ಆಯ್ಕೆ ಮಾಡಿ ಸೇರಿಸಿದರೆ ಸಾಲದು. ಮಕ್ಕಳನ್ನು ಮಾನಸಿಕವಾಗಿ ತಯಾರು ಮಾಡಿ ಕಳುಹಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಪ್ರಸ್ತುತ ಶಿಕ್ಷಣ ಪರಿಸ್ಥಿತಿಯೂ ಹಾಗೆಯೇ ಇದೆ. ಬಹಳ ಮಂದಿ ಪೋಷಕರು ನನಗೆ ಕರೆ ಮಾಡುತ್ತಾರೆ. ನನ್ನ ಮಗು ಅದ್ಭುತ ಶಿಕ್ಷಣ ಸಂಸ್ಥೆಯಲ್ಲಿದೆ. ಆದರೆ ಇತ್ತೀಚೆಗೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ, ಬಹಳ ಕಷ್ಟ ಪಡುತ್ತಿದ್ದಾನೆ, ಏನು ಕೇಳಿದರೂ ಉತ್ತರ ಕೊಡುವುದಿಲ್ಲ, ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ, ನಿನಗೆ ಅರ್ಥವಾಗಲ್ಲ ಬಿಡು ಎಂದುಬಿಡುತ್ತಾನೆ. ಯಾವಾಗಲೂ ಅವನು ಯಾರನ್ನೋ ಲವ್ ಮಾಡುತ್ತಿದ್ದಾನೆ ಎಂಬುದೇ ನನಗೆ ಅನುಮಾನ, ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ನನಗೆ ಅನ್ನಿಸುವುದು ಮಕ್ಕಳಿಗೆ ಕಾಲೇಜನ್ನು ಆಯ್ಕೆ ಮಾಡುವುದು ಸುಲಭ. ಆದರೆ ಪೋಷಕರು ಮಾನಸಿಕವಾಗಿ ತಯಾರು ಮಾಡಿಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಿಕೊಡಬೇಕು. ಆ ರೀತಿಯ ಮಾರ್ಗದರ್ಶನ ವಿದ್ಯಾಪೀಠದಲ್ಲಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PUBLIC TV

ವಿದ್ಯಾಪೀಠದಲ್ಲಿ ನಡೆದ ಎಲ್ಲ ಮಾಹಿತಿಗಳು ಪಬ್ಲಿಕ್ ಟಿವಿ ಯುಟ್ಯೂಬ್, ಫೇಸ್‌ಬುಕ್ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಅದರಿಂದಲೂ ಮಾಹಿತಿ ತಿಳಿದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್‌ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ

ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಮಾತನಾಡಿ, ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ. ನಾವಿದ್ದಾಗ ಆಯ್ಕೆಗಳು ಇರಲಿಲ್ಲ. ಇಲ್ಲಿನ ಬಹು ಆಯ್ಕೆಗಳನ್ನು ನೋಡಿ ನಾನೂ ಒಂದು ಕಾಲೇಜಿಗೆ ಸೇರಬೇಕು ಅನ್ನಿಸಿತು. ಅದ್ಭುತ ಆಯ್ಕೆಗಳನ್ನು `ಪಬ್ಲಿಕ್ ಟಿವಿ’ ವೇದಿಕೆ ಮೂಲಕ ಅನಾವರಣ ಮಾಡಿತು. ಮಕ್ಕಳಿಗೆ ಓದಲು ಸಾವಿರಾರು ದಾರಿಗಳಿವೆ. ಉತ್ತಮ ದಾರಿಗಳಲ್ಲಿ ಸಾಗಲು ಅವಕಾಶಗಳಿವೆ. ಇದಕ್ಕೆ ಪಬ್ಲಿಕ್ ಟಿವಿ ವೇದಿಕೆ ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

PTV

ಏನೇನು ವಿಶೇಷತೆ?
ವಿದ್ಯಾಪೀಠ ಎಜುಕೇಶನ್ ಎಕ್ಸ್ಪೋ ಕೊನೆಯ ದಿನದಂದು ಬೆಳಗ್ಗೆ ಹ್ಯಾಂಡ್‌ರೈಟಿಂಗ್ ಅಂಡ್ ಮೆಮೊರಿ ಎಕ್ಸ್‌ಪರ್ಟ್‌ಡಾ.ರಫೀವುಲ್ಲಾ ಬೇಗ್ ಅವರಿಂದ Accelerate Your Career With Super Power Memory ಉಪನ್ಯಾಸ ನಡೆಯಿತು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದಲೇ ಭಾಗವಹಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಬಳಿಕ ನೀಟ್ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತ ರಾಥೋಡ್ ಮಾಹಿತಿ ನೀಡಿದರು. ಮಧ್ಯಾಹ್ನ ಊಟದ ಬಳಿಕ Global Education Forum- Insights From NEX GEN Educationalist ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅತಿಥಿಗಳಾದ ಕ್ರಿಸ್ಟಿಯೋ ಜೋಸೆಫ್, ಅದ್ವಿತೀಯ, ಡಾ.ವಿದ್ಯಾಶೆಟ್ಟಿ, ವಿಜೇತ ಕೆಳಮನೆ, ಡಾ.ಶಂಕಪಾಲ್, ಡಾ.ಬಿ.ವಿ.ರವಿಶಂಕರ್ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

ಮಕ್ಕಳಿಗೆ ಫನ್‌ಗೇಮ್ ಅಚ್ಚುಮೆಚ್ಚು:
ವಿದ್ಯಾಪೀಠ ಕೊನೆ ದಿನವೂ ಹಲವು ಫನ್ ಗೇಮ್ಸ್ ನಡೆದವು. ಸ್ಲೋ ಸೈಕ್ಲಿಂಗ್ ರೇಸ್, ಕಾಲೇಜು ಲೋಗೋ ಹುಡುಕುವ ಸ್ಪರ್ಧೆ, ಬೈಕ್ ಕೀ ಚಾಲೆಂಜ್ ಸೇರಿದಂತೆ ಹಲವು ವಿಶೇಷ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಹಾಗೂ ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದ ಮುಖ್ಯಸ್ಥ ಜೋಸೆಫ್ ಅವರು ಎಲೆಕ್ಟ್ರಿಕ್‌ ಬೈಕ್ ಅನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು. ಜೊತೆಗೆ ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳಿಗೆ ಬೈಸಿಕಲ್ ಬಹುಮಾನವಾಗಿ ನೀಡಲಾಯ್ತು. ಅಲ್ಲದೆ ಅರ್ಧ ಗಂಟೆಗೊಮ್ಮೆ ಆಕರ್ಷಕ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

Live Tv

TAGGED:Education Expohr ranganathLahari VeluPublic TVstudentsVidyapeeta Expoಪಬ್ಲಿಕ್ ಟಿವಿಲಹರಿ ವೇಲುವಿದ್ಯಾಪೀಠಶೈಕ್ಷಣಿಕ ಮೇಳಹೆಚ್.ಆರ್.ರಂಗನಾಥ್
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

MGNREGA VB G RAM G
Latest

ಮನರೇಗಾ ರದ್ದು ಮೂಲಕ SC/ST, ಹಿಂದುಳಿದ ಭೂಹೀನರ ಅನ್ನ ಕಸಿಯುವ ಕುತಂತ್ರ – ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ

Public TV
By Public TV
2 hours ago
Bengaluru PG fined Rs 50000 for not maintaining cleanliness
Bengaluru City

ಸ್ವಚ್ಛತೆ ಕಾಪಾಡದ್ದಕ್ಕೆ ಬೆಂಗಳೂರು ಪಿಜಿಗೆ ಬಿತ್ತು 50 ಸಾವಿರ ದಂಡ

Public TV
By Public TV
2 hours ago
Pakistan Army Asim Munir
Latest

ಆಪರೇಷನ್‌ ಸಿಂಧೂರ ವೇಳೆ ದೇವರ ದಯೆಯಿಂದ ಬದುಕುಳಿದಿದ್ದೇವೆ: ಮುನೀರ್‌

Public TV
By Public TV
2 hours ago
Mandya Youth Drowned In Cauvery River
Districts

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

Public TV
By Public TV
2 hours ago
ಡಿಕೆ ಆದಿಕೇಶವುಲು ಪುತ್ರಿ ಕಲ್ಪಜಾ, ಪುತ್ರ ಶ್ರೀನಿವಾಸ್‌
Bengaluru City

ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌ – ಸಿಬಿಐನಿಂದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಅರೆಸ್ಟ್‌

Public TV
By Public TV
3 hours ago
DK Shivakumar 9
Bengaluru City

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ: ಡಿಕೆಶಿ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?