ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

Public TV
1 Min Read
TMK LOVE 1

ತುಮಕೂರು: ಯುವಕ, ಯುವತಿಯರು ತಾವು ಪ್ರೀತಿಸಿದಾತ ಅಥವಾ ಆಕೆಯನ್ನು ಮದುವೆಯಾಗಲು ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ. ಅಂತೆಯೇ ತುಮಕೂರಿನಲ್ಲಿ ಯುವಕನೊಬ್ಬ ರಥಕ್ಕೆ ಬಾಳೆಹಣ್ಣು ಎಸೆದ ಘಟನೆ ನಡೆದಿದೆ.

TMK LOVE

ಹೌದು. ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯಲ್ಲಿ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಪ್ರೇಮಿ ರಥಕ್ಕೆ ಎಸೆದಿದ್ದಾನೆ. ಈ ಮೂಲಕ ಪ್ರಿಯತಮೆಯನ್ನು ಮದುವೆಯಾಗಲು ದೇವಿ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ಬುಡಕಟ್ಟು ಸಮುದಾಯದ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಬಾಲಕ – ಕ್ರಮಕ್ಕೆ ಸಿಎಂ ಸೂಚನೆ

LOVE

“ನಮ್ಮುಡುಗಿ ಜೊತೆ ಮದುವೆ ಆಗಲಿ” ಪಿ ಲವ್ ಎಲ್ ಅಂತಾ ಬಾಳೆಹಣ್ಣಿನಲ್ಲಿ ಬರೆದಿದ್ದಾನೆ. ನಂತರ ಅದನ್ನು ರಥಕ್ಕೆ ಎಸೆಯುವ ಮೂಲಕ ದೇವಿಯಲ್ಲಿ ಬೇಡಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *