ತಿರುಪತಿಗೆ ಭೇಟಿ ನೀಡಿದ ಮಾಜಿ ವಿಧಾನಪರಿಷತ್ ಶಾಸಕ ಡಾ.ಟಿ.ಎ ಶರವಣ

Public TV
1 Min Read
SHARAVANA_ TIRUPATHI

ಬೆಂಗಳೂರು: ಇಂದು ಮಾಜಿ ವಿಧಾನ ಪರಿಷತ್ ನ ಶಾಸಕ ಡಾ. ಟಿ.ಎ.ಶರವಣ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ.

SHARAVANA 2

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಾಂಕ್ರಮಿಕ ರೋಗದಿಂದ ಸಂಪೂರ್ಣ ಮುಕ್ತವಾಗಲಿ ಮತ್ತು ರಾಜ್ಯದ ರೈತರ ಒಳ್ಳೆಯ ಮಳೆ, ಬೆಳೆಯಾಗಲಿ ಮತ್ತು ಎಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಸಿಗಲಿ. ಲೋಕ ಕಲ್ಯಾಣವಾಗಲಿ ಎಂದು ಶ್ರೀ ವೆಂಕಟೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

SHARAVANA 1

ತಿರುಪತಿ ದೇವಸ್ಥಾನ ಬಳಿ ಪೌರ ಕಾರ್ಮಿಕರ ಜೊತೆಯಲ್ಲಿ ಸರಳವಾಗಿ ಡಾ.ಟಿ.ಎ.ಶರವಣರವರು ಹುಟ್ಟುಹಬ್ಬವನ್ನು ಅಚರಿಸಿದರು. ಕೊರೊನಾ ವಾರಿಯರ್ಸ್ ಗಳಾದ ಸ್ವಚ್ಛತಾ ಕಾರ್ಮಿಕರನ್ನು ಅಭಿನಂದಿಸಿ, ಉಡುಗೊರೆ ನೀಡಲಾಯಿತು. ನಂತರ ಸಂಜೆ ವಿಕಲಚೇತನರಿಗೆ ವೀಲ್‍ಚೇರ್ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ಮೂಲಕ ಸರಳ ಹುಟ್ಟುಹಬ್ಬವನ್ನು ಆಚರಿಸಲಾಯಿತು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *