ರಾಗಿಣಿ ವಿರುದ್ಧ ಯಾವುದೇ ಸಾಕ್ಷಿ ಲಭಿಸಿಲ್ಲ, ತಪ್ಪೊಪ್ಪಿಕೊಂಡಿಲ್ಲ: ವಕೀಲ ಸುದರ್ಶನ್

Public TV
3 Min Read
ragini 4 1

– ರಾಗಿಣಿ ಮನೆಯಲ್ಲೇ ಏನು ಸಿಕ್ಕಿಲ್ಲ
– ಖಂಡಿತ ಜಾಮೀನು ಸಿಗುತ್ತಿತ್ತು
– ರವಿಶಂಕರ್ ಹೆಸರು ಎಫ್‌ಐರ್‌ನಲ್ಲಿ ಇಲ್ಲ

ಬೆಂಗಳೂರು: ನಟಿ ರಾಗಿಣಿ ಅವರು ಸಿಸಿಬಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಅವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ರಾಗಿಣಿ ಪರ ವಕೀಲರಾಗಿರುವ ಸುದರ್ಶನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ರಾಗಿಣಿ ಅವರನ್ನು ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ವಹಿಸಿದ ಕುರಿತು ಮಾಹಿತಿ ನೀಡಿದ ಅವರು, ಸದ್ಯ ನಾನು ಅವರ ಪ್ರಕರಣವನ್ನು ಪ್ರತಿನಿಧಿಸುತ್ತಿಲ್ಲ. ಏಕೆಂದರೆ ನನಗೆ ಪ್ರಕರಣವನ್ನು ಪ್ರತಿನಿಧಿಸದಂತೆ ಅವರ ತಂದೆಯವರೆ ನನಗೆ ಲಿಖಿತ ಸಂದೇಶ ನೀಡಿದ್ದಾರೆ. ಆದ್ದರಿಂದ ನಾನು ಪ್ರಕರಣದಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ರಾಗಿಣಿ

ragini 2 2

ರಾಗಿಣಿ ಅವರ ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಟಿ ರಾಗಿಣಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಫ್‍ಐಆರ್‍ನಲ್ಲಿ ಈ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ. ಆದ್ದರಿಂದ ಪೊಲೀಸರ ತನಿಖೆಯಲ್ಲಿ ಲೋಪ ಇದೆ. ಅಲ್ಲದೇ ಸೀಜ್ ಮೆಮೋದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ರಾಗಿಣಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಕೇವಲ ಆರೋಪಿಗಳ ಹೇಳಿಕೆ ಆಧರಿಸಿ ಅರೆಸ್ಟ್ ಮಾಡಿದ್ದಾರೆ ಅಷ್ಟೇ. ಆದ್ದರಿಂದಲೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದೆವು. ಈಗ ನಾನು ಪ್ರಕರಣದಿಂದ ಹೊರ ನಡೆದಿರುವುದರಿಂದ ಅವರು ಬೇರೆ ವಕೀಲರೊಂದಿಗೆ ಈಗಾಗಲೇ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಮುಂದುವರಿಸಬಹುದು ಅಥವಾ ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂದರು. ಇದನ್ನೂ ಓದಿ: ಸಂಜನಾ ಪರಿಚಯವೇ ಪ್ರಶ್ನೆಗೆ ಥ್ಯಾಂಕ್ಯೂ, ಥ್ಯಾಂಕ್ಯೂ ಎಂದು ಹೇಳಿ ಹೊರಟ ಜಮೀರ್

CCB

ರವಿಶಂಕರ್ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ವಸ್ತು ಪತ್ತೆಯಾಗಿರುವ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷಿಗಳು ಇಲ್ಲದೇ, ಕೇವಲ ಸೆಕೆಂಡರಿ ಅಂಶಗಳನ್ನು ಉಲ್ಲೇಖಿಸಿ ಆರೋಪ ಸಾಬೀತು ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರಾಥಮಿಕ ಸಾಕ್ಷಿಗಳಿಗೆ ಪೂರಕವಾಗಿ ಸೆಕೆಂಡರಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈಗ ಸೆಕೆಂಡರಿ ಅಂಶಗಳ ಆಧಾರದಲ್ಲೇ ಅವರ ಬಂಧನವಾಗಿದೆ. ಇದನ್ನೇ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿ ಅರ್ಜಿ ಸಲ್ಲಿಕೆ ಮಾಡಿದ್ದೇವು ಎಂದರು. ಇದನ್ನೂ ಓದಿ: ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

ಇಂತಹ ಪ್ರಕರಣದಲ್ಲಿ ಸೀಜ್ ಮೆಮೋ ಪ್ರಮುಖವಾಗುತ್ತದೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರೆ ಬಹುಬೇಗ ಅವರಿಗೆ ಜಾಮೀನು ಲಭಿಸುತ್ತಿತ್ತು. ಆದರೆ ಅವರು ವಕೀಲರನ್ನು ದಿಢೀರ್ ಬದಲಾವಣೆ ಮಾಡಿದ್ದು ಏಕೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕಸ್ಟಡಿಗೆ ಪಡೆದಿದ್ದಾರೆ. ಯಾವುದೇ ಪೊಲೀಸರು ಮೌಖಿಕವಾಗಿ ನೀಡುವ ಹೇಳಿಕೆ ಪ್ರಕರಣದಲ್ಲಿ ಪ್ರಮುಖವಾಗುವುದಿಲ್ಲ. ಅವರು ಲಿಖಿತವಾಗಿ ಕೋರ್ಟಿಗೆ ನೀಡಿರುವ ವರದಿಯಷ್ಟೇ ಸಾಕ್ಷಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

RAGINI CCB

ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ರಾಗಿಣಿ ಅವರನ್ನು ಬಂಧಿಸಿದ್ದಾರೆ ಅಷ್ಟೇ. ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಅವರ ಬಂಧನವಾಗಿದ್ದು, ಪ್ರಾಥಮಿಕ ಸಾಕ್ಷಿ ಇಲ್ಲದೇ ಡಿಜಿಟಲ್ ಸಾಕ್ಷಿಗಳನ್ನು ಪ್ರಸ್ತುತ ಪಡಿಸಿ ಬಂಧನ ಮಾಡಿರುವುದು ಸರಿಯಲ್ಲ ಎಂಬುವುದು ನನ್ನ ವಾದ. ರವಿಶಂಕರ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಮಾಡಿಲ್ಲ. ಆದರೆ ಅವರನ್ನು ಬಂಧನ ಮಾಡಲಾಗಿದೆ. ಏಕೆ ಅವರ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ರವಿಶಂಕರ್ ಅವರ ಹೇಳಿಕೆಯಿಂದ ಆರೋಪ ಸಾಬೀತು ಮಾಡಲು ಆಗುವುದಿಲ್ಲ. ಆದರೆ ರಾಗಿಣಿ ಅವರ ವಿರುದ್ಧ ಸಾಕ್ಷಿ ಇಲ್ಲದೇ ಆರೋಪ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಲೋಪವಿದೆ. ಕಾನೂನಿನ ಅಡಿ ಪ್ರಕರಣದ ವಿಚಾರಣೆ ನಡೆಸದೆ ಅವರನ್ನು ಬಂಧಿಸಿದ್ದಾರೆ ಎಂದರು.

ಇಂದು ರಾಗಿಣಿ ಅವರ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ರಾಗಿಣಿ ಪರ ವಕೀಲರು ಹಾಜರಿರಲಿಲ್ಲ. ಪರಿಣಾಮ ಸಿಸಿಬಿ ಪೊಲೀಸರು ಮನವಿ ಮೇರೆಗೆ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಇದನ್ನು ಸ್ವತಃ ಸಿಸಿಬಿ ಪೊಲೀಸರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎನ್ನಲಾಗಿದ್ದು, ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ 2ನೇ ಬಾರಿ ಕಸ್ಟಡಿಗೆ ಮನವಿ ಮಾಡಿದರೆ 2-3 ದಿನ ನೀಡಲಾಗುತ್ತಿತ್ತು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *