ಗದಗ: ನಿರಂತರ ಮಳೆಗೆ ಹಳೆಕಾಲದ ಮನೆಗಳು ಕುಸಿತವಾಗುತ್ತಿದ್ದು, ಅದೃಷ್ಟವಶಾತ್ ಭಾರೀ ಅನಾಹುತದಿಂದ ಜನ ಪಾರಾಗಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಟಿಎಂಸಿ ರಸ್ತೆನಲ್ಲಿ ನಡೆದಿದೆ.
ಪಟ್ಟಣದ ಚನ್ನಬಸಪ್ಪ ಕತ್ತಿ, ಸಿದ್ಲಿಂಗಪ್ಪ ಕತ್ತಿ ಹಾಗೂ ಸಿ.ಜಿ.ಹಸಬಿ ಎಂಬುವರ ಮನೆಗಳು ನೆಲಸಮವಾಗಿವೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ಸಂಭವಿಸಿದೆ. ಯಾರು ಇಲ್ಲದ ವೇಳೆ ಮನೆ ಬಿದ್ದ ಶಬ್ಧ ಕೇಳಿ ಪಕ್ಕದ ಮನೆಯವರೂ ಹೊರಬಂದಿದ್ದಾರೆ. ಆಗ ಅದಕ್ಕೆ ಹತ್ತಿಕೊಂಡ ಇನ್ನೆರಡು ಮನೆಗಳು ಕುಸಿವಾಗಿವೆ. ಇದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜಿಲ್ಲೆನಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಘಟನಾ ಸ್ಥಳಕ್ಕೆ ನರಗುಂದ ಪುರಸಭೆ, ತಹಶೀಲ್ದಾರ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ನೊಂದ ಸಂತ್ರಸ್ತರಿಗೆ ಶೀಘ್ರದಲ್ಲೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.