ಅಮೂಲ್ಯ ಭಾಷಣ ಮಾಡಬೇಕಿದ್ದ ಕಾಪುವಿನ ಮೈದಾನದಲ್ಲಿ ಬಿರುಗಾಳಿ

Public TV
1 Min Read
amulya leon 1

ಉಡುಪಿ: ಬೆಂಗಳೂರಿನಲ್ಲಿ ನಡೆದ ಸಿಎಎ, ಎನ್.ಆರ್.ಸಿ ವಿರುದ್ಧ ಹೋರಾಟ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ನಡುವೆ ಅಮೂಲ್ಯ ನಾಳೆ ಭಾಷಣ ಮಾಡಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ ಎದ್ದಿದೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ಸಿಎಎ ವಿರುದ್ಧದ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿತ್ತು. ಬೆಳಪು ಗ್ರಾಮದ ಮಲ್ಲಾರ್ ಮುಸ್ಲಿಂ ಒಕ್ಕೂಟ ಸಿಎಎ ವಿರೋಧಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಪ್ರತಿಭಟನಾ ಸಭೆಗೆ ವೇದಿಕೆ ನಿರ್ಮಾಣ ಮತ್ತು ತಯಾರಿಗಳು ನಡೆಯುತ್ತಿದೆ. ಈ ಹೊತ್ತಿನಲ್ಲೇ ಬೆಳಪು ಮೈದಾನದಲ್ಲಿ ದೊಡ್ಡ ಸುಂಟರಗಾಳಿಯೊಂದು ಸುತ್ತಿದೆ. ಸುಂಟರಗಾಳಿಯ ರಭಸಕ್ಕೆ ಹತ್ತಾರು ಖುರ್ಚಿಗಳು ಗಾಳಿಯಲ್ಲಿ ಗಿರಕಿ ಹೊಡೆದವು. ನೆಲದಿಂದ ಚಿಮ್ಮಿಸಿದೆ.

amulya leon2

ಬಿರುಗಾಳಿ ಕಸ, ಕಡ್ಡಿ ಧೂಳು ಪೇಪರ್ ಎಲ್ಲವನ್ನು ಹಾರಿಸಿಬಿಟ್ಟಿದೆ. ಅಮೂಲ್ಯ ಅರೆಸ್ಟ್ ಆಗದಿದ್ದರೆ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣವನ್ನು ಮಾಡಬೇಕಿತ್ತು. ಮೈದಾನದಲ್ಲಿ ಎದ್ದ ಭೀಕರ ಸುಂಟರಗಾಳಿಯ ವಿಡಿಯೋ ಈಗ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಸುಂಟರಗಾಳಿ ಎಂಬ ಹೆಸರಲ್ಲಿ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *