ಬೈಕಿಗೆ ದಾರಿ ಬಿಡಲಿಲ್ಲವೆಂದು KSRTC ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

Public TV
1 Min Read
ckb ksrtc

ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ. ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

ಅಕ್ರಂ, ನಹೀಮುಲ್ಲಾ ಹಾಗೂ ಇನಾಯತ್ ಹಲ್ಲೆ ಮಾಡಿದ ಯುವಕರು. ಅಕ್ರಂ, ನಹೀಮುಲ್ಲಾ ಹಾಗೂ ಇನಾಯತ್ ಬಾಗೇಪಲ್ಲಿ ಗ್ರಾಮದವರಾಗಿದ್ದು, ಇದೇ ಗ್ರಾಮದ ಡಿಪೋಗೆ ಸೇರಿದ ಕೆಎಸ್ಆರ್‌ಟಿಸಿ ಚಾಲಕ ಸಿದ್ದಪ್ಪ ಹಾಗೂ ನಿರ್ವಾಹಕ ನರಸಿಂಹಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಇ. ತಿಮ್ಮಸಂದ್ರ ಗ್ರಾಮದಲ್ಲಿ ಸಂತೆ ನಡೆಯುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಕಿರಿದಾದ ರಸ್ತೆಯಲ್ಲಿ ಜನಸಂದಣಿ ನಡುವೆ ಬಸ್ ಸಾಗಿತ್ತು. ಆದರೆ ಹಿಂಬದಿಯಲ್ಲಿದ್ದ ಬೈಕ್‍ಗೆ ದಾರಿ ಬಿಡಲಿಲ್ಲ ಯಾಕೆ ಎಂದು ಚಾಲಕ ಸಿದ್ದಪ್ಪ ಜೊತೆ ಯುವಕರು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಅಡ್ಡ ಹೋದ ನಿರ್ವಾಹಕನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *