ನಕಲಿ ಕತ್ತಿಯಿಂದ ಪೇದೆಯನ್ನ ಬೆನ್ನಟ್ಟಿದ್ದ ವ್ಯಕ್ತಿ ಎರಡು ದಿನಗಳ ಬಳಿಕ ಅರೆಸ್ಟ್

Public TV
1 Min Read
AP Police A

ವಿಶಾಖಪಟ್ಟಣಂ: ನಕಲಿ ಕತ್ತಿಯಿಂದ ಪೇದೆಯನ್ನು ಬೆನ್ನಟ್ಟಿದ್ದ ವ್ಯಕ್ತಿಯನ್ನು ಎರಡು ದಿನಗಳ ಬಳಿಕ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣಂ ನಗರದ ಮಕ್ಕಳ ರಂಗಮಂದಿರದಲ್ಲಿ ನವೆಂಬರ್ 17ರಂದು ಘಟನೆ ನಡೆದಿತ್ತು. ಆದರೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯು ಇಂದು ಸಿಕ್ಕಿಬಿದ್ದಿದ್ದಾನೆ.

AP Police

ಮದ್ಯ ಸೇವಿಸಿ ಮಕ್ಕಳ ರಂಗಮಂದಿರಕ್ಕೆ ಬಂದು ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ಆರೋಪಿಯು ಕೈಯಲ್ಲಿ ಹಿಡಿದಿದ್ದ ನಕಲಿ ಕತ್ತಿಯಿಂದ ಪೊಲೀಸರಿಗೆ ಭಯ ಮೂಡಿಸಿದ್ದ. ಅಷ್ಟೇ ಅಲ್ಲದೆ ಓರ್ವ ಪೊಲೀಸ್ ಪೇದೆಯ ಕಡೆಗೆ ಏಕಾಏಕಿ ನುಗ್ಗಿ ದಾಳಿ ಮಾಡುವಂತೆ ನಟಿಸಿದ್ದ. ಇದರಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿಶಾಖಪಟ್ಟಣಂ ಪೊಲೀಸರು ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆದಿದ್ದರು. ಇಂದು ಸಿಕ್ಕಿಬಿದ್ದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಹಿಡಿದಿದ್ದು ನಕಲಿ ಕತ್ತಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *