Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಜಮಾನನೇ ಸರಿಯಿಲ್ಲದಿದ್ದಾಗ ಕುಟುಂಬ ಹೇಗೆ ಸರಿಯಿರುತ್ತೆ – ಸಿಎಂ ವಿರುದ್ಧ ಎಂಟಿಬಿ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru Rural | ಯಜಮಾನನೇ ಸರಿಯಿಲ್ಲದಿದ್ದಾಗ ಕುಟುಂಬ ಹೇಗೆ ಸರಿಯಿರುತ್ತೆ – ಸಿಎಂ ವಿರುದ್ಧ ಎಂಟಿಬಿ ಕಿಡಿ

Bengaluru Rural

ಯಜಮಾನನೇ ಸರಿಯಿಲ್ಲದಿದ್ದಾಗ ಕುಟುಂಬ ಹೇಗೆ ಸರಿಯಿರುತ್ತೆ – ಸಿಎಂ ವಿರುದ್ಧ ಎಂಟಿಬಿ ಕಿಡಿ

Public TV
Last updated: July 10, 2019 12:48 pm
Public TV
Share
2 Min Read
mtb nagaraj
SHARE

– ಸಿಎಂ ಹೇಳೋದು ಒಂದು ಮಾಡೋದು ಮತ್ತೊಂದು
– ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ

ಬೆಂಗಳೂರು: ಸರ್ಕಾರ ಒಂದು ಕುಟುಂಬ ಇದ್ದಂತೆ. ಮನೆ ಯಜಮಾನ ಸರಿಯಾಗಿರಬೇಕು. ಯಜಮಾನನೇ ಸರಿಯಿಲ್ಲ ಎಂದರೆ ಕುಟುಂಬ ಹೇಗೆ ಸರಿ ಇರುತ್ತೆ ಎಂದು ಪ್ರಶ್ನಿಸುವ ಮೂಲಕ ಎಂಟಿಬಿ ನಾಗರಾಜ್ ನೇರವಾಗಿಯೇ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

CM HDK A

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್‍ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಹೆಚ್.ಡಿ ರೇವಣ್ಣರಿಂದಲೇ ಮೈತ್ರಿ ಸರ್ಕಾರಕ್ಕೆ ಈ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಜೆಡಿಎಸ್ ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಆಡಳಿತದಿಂದ ಬೇಸತ್ತು ಅತೃಪ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ಸಿಎಂ ಹೇಳೋದು ಒಂದು, ಮಾಡೋದು ಇನ್ನೊಂದು. ರೇವಣ್ಣ ಅವರ ಮಾತು ಕೇಳಿಯೇ ಸಿಎಂ ಕೆಟ್ಟರು. ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್‍ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

revanna HDK

ಅತೃಪ್ತ ಶಾಸಕರು ದುಡ್ಡಿಗಾಗಿ ಹೋದವರಲ್ಲ ಅವರ ಬಳಿ ಹಣವಿದೆ. ಅತೃಪ್ತರನ್ನು ಮನವೊಲಿಸಿ ಸಚಿವ ಡಿಕೆ ಶಿವಕುಮಾರ್ ಅವರು ಕರೆತರುತ್ತಾರೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ನಾನು ಭಿಕ್ಷೆ ನೀಡಿದ್ದೇನೆ ಹೊರತು ಬೇಡಿಲ್ಲ. ಕಾಂಗ್ರೆಸ್ ಬಿಡಲ್ಲ ಬಿಜೆಪಿಗೆ ಹೋಗಲ್ಲ ಎಂದಯ ಸ್ಪಷ್ಟಪಡಿಸಿದ್ದಾರೆ.

mtb nagaraj 1

ಮುಖ್ಯಮಂತ್ರಿ ಬದಲಾಗಬೇಕು ಎಂದು ಹೇಳುತ್ತಿಲ್ಲ. ಅವರೇ ಪೂರ್ಣ ಅವಧಿಗೆ ಸಿಎಂ ಆಗಿರಲಿ, ಆದರೆ ಅವರ ಆಡಳಿತ ವೈಖರಿ ಬದಲಾಗಬೇಕು. ಎಲ್ಲಾ ಇಲಾಖೆಗಳಲ್ಲೂ ಸಿಎಂ ಹಾಗೂ ರೇವಣ್ಣ ಕೈ ಆಡಿಸ್ತಾರೆ. ಜೆಡಿಎಸ್ ಅವರಿಗೆ ಒಂದು ರೀತಿ, ಕಾಂಗ್ರೆಸ್ ಅವರಿಗೆ ಒಂದು ರೀತಿ ಮಾಡುತ್ತಾರೆ. ಸಚಿವರು, ಶಾಸಕರು ಸಿಎಂ ಬಳಿ ಹೋದರೆ ಅವರು ಸರಿ ಪ್ರತಿಕ್ರಿಯಿಸಲ್ಲ. ಶಾಸಕರು ಕ್ಷೇತ್ರ ಅಭಿವೃದ್ಧಿ ಬಗ್ಗೆ ಕೇಳಿದರೆ ಸರಿಯಾಗಿ ಸ್ಪಂದಿಸಲ್ಲ. ಹೀಗಾಗಿ ಸಿಎಂ ಅವರ ಪಕ್ಷಭೇದ ಆಡಳಿತ ನೋಡಿ ಬೇಸತ್ತ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ. ನನಗೂ ಬೇಸರವಿದೆ, ಆದರೆ ನಾನು ಪಕ್ಷ ಬಿಡಲ್ಲ. ಇನ್ನಾದರೂ ಸಿಎಂ ಅವರು ಮೈತ್ರಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಪಕ್ಷಭೇದ ಮರೆತು ಕೆಲಸ ಮಾಡಲಿ ಎಂದು ಅಸಮಾಧಾನ ಹೊರಹಾಕಿದರು.

MUMBAI 1

ಜೆಡಿಎಸ್ ಅಧ್ಯಕ್ಷರೇ ಮುಂಬೈಗೆ ಹೋಗಿದ್ದಾರೆ. ಈಗಲಾದರೂ ಸಿಎಂ ತಮ್ಮ ತಪ್ಪು ಅರಿತುಕೊಳ್ಳಲಿ. ಬಸವರಾಜು, ಸೋಮಶೇಖರ್ ಹತ್ತಿರ ಮಾತನಾಡಿದ್ದೇನೆ. ಸಿಎಂಗಿಂತ ಡಿಕೆಶಿ ಅವರು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ಅವರೂ ಸಹ ಅತೃಪ್ತರನ್ನು ಕರೆತರುವ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತ ಬಿಟ್ಟರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಸಿಎಂ ಅವರಿಗೆ ಎಂಟಿಬಿ ಸಲಹೆ ನೀಡಿದರು.

TAGGED:bengalurucmcongressd k shivakumarjdsmtb nagarajPublic TVrevannaಎಂಟಿಬಿ ನಾಗರಾಜ್ಕಾಂಗ್ರೆಸ್ಜೆಡಿಎಸ್ಡಿ.ಕೆ.ಶಿವಕುಮಾರ್ಪಬ್ಲಿಕ್ ಟಿವಿಬೆಂಗಳೂರುರೇವಣ್ಣಸಿಎಂ
Share This Article
Facebook Whatsapp Whatsapp Telegram

Cinema news

gilli hanumantha
ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವನೇ ಗೆಲ್ತಾನೆ: ಬಿಗ್ ಬಾಸ್ 11 ವಿನ್ನರ್ ಹನುಮಂತ ಮಾತು
Cinema Haveri Latest Main Post TV Shows
BBK 12 Gilli Nata Gym Ravi
ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಹೆಸರು ಕೇಳಿ ಬರ್ತಿದೆ: ಜಿಮ್ ರವಿ
Latest Sandalwood Top Stories TV Shows
bigg boss sudeep
ಬಿಗ್‌ ಬಾಸ್‌ ವಿನ್ನರ್‌ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗುತ್ತೆ: ಸುದೀಪ್‌
Cinema Latest Main Post TV Shows
bigg boss kannada 12 finalists
Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?
Cinema Latest Main Post TV Shows

You Might Also Like

Sara Mahesh
Bengaluru City

ಜೆಡಿಎಸ್‌ ಪಾಳಯದಲ್ಲಿ ಕ್ಷಿಪ್ರ ಕ್ರಾಂತಿ – ಜಿಟಿಡಿ ಕ್ಷೇತ್ರದಿಂದ ಸಾರಾ ಮಹೇಶ್‌ ಕಣಕ್ಕಿಳಿಸಲು ಪ್ಲ್ಯಾನ್‌!

Public TV
By Public TV
4 minutes ago
01 16
Districts

ಸಿದ್ರಾಮಯ್ಯಗೂ ಟ್ರಾಫಿಕ್‌ ಬಿಸಿ – ವಾಹನಗಳ ತೆರವಿಗೆ ಹರಸಾಹಸ; ಬೈಕ್ ಸವಾರನಿಗೆ ಒದಿಯಲು ಮುಂದಾದ ಎಸ್ಪಿ!

Public TV
By Public TV
17 minutes ago
Vijay
Latest

ಕರೂರು ಕಾಲ್ತುಳಿತ – ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ವಿಜಯ್‌ಗೆ ಸಮನ್ಸ್

Public TV
By Public TV
27 minutes ago
BN Ravikumar
Chikkaballapur

`ಧಮ್ಕಿʼ ರಾಜೀವ್‌ ಬಂಧಿಸದಂತೆ ಡಿಕೆಶಿ, ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ – ಶಾಸಕ ರವಿಕುಮಾರ್

Public TV
By Public TV
1 hour ago
Namma Metro Yellow Line
Bengaluru City

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಾಳೆ ಬೆಂಗಳೂರಿಗೆ ತಲುಪಲಿದೆ ಹಳದಿ ಮಾರ್ಗದ 8ನೇ ರೈಲು

Public TV
By Public TV
1 hour ago
truck rams cars UP toll
Latest

ಯುಪಿ ಟೋಲ್ ಬೂತ್ ಬಳಿ ಕಾರುಗಳಿಗೆ ಡಿಕ್ಕಿ; 50 ಮೀಟರ್‌ವರೆಗೆ ಸಿಬ್ಬಂದಿ ಎಳೆದೊಯ್ದ ಟ್ರಕ್‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?