ಮಳೆಗಾಗಿ ದೇವರಿಗೇ ಜಲ ದಿಗ್ಬಂಧನ ಹಾಕಿದ ಗ್ರಾಮಸ್ಥರು

Public TV
1 Min Read
blg dhigbhandana

ಬೆಳಗಾವಿ: ಮಳೆಗಾಗಿ ಜನರು ದೇವರ ಮೊರೆ ಹೋಗೋದು ಸಾಮಾನ್ಯ. ಆದರೆ ಗ್ರಾಮದಲ್ಲಿ ಮಳೆ ಬಾರದ ಹಿನ್ನೆಲೆ ದೇವರಿಗೆ ಗ್ರಾಮಸ್ಥರು ಜಲ ದಿಗ್ಬಂಧನ ಹಾಕಿರುವ ಅಪರೂಪದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.

ಗ್ರಾಮದಲ್ಲಿ ಮಳೆಯಾಗಲಿ ಎಂದು ದೇವರ ಗರ್ಭ ಗುಡಿಯಲ್ಲಿ ನೀರು ತುಂಬಿಸಿ ದ್ವಾರ ಮುಚ್ಚಿ ಗ್ರಾಮಸ್ಥರು ದೇವರಿಗೆ ದಿಗ್ಬಂಧನ ಹಾಕಿದ್ದಾರೆ. ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿರುವ ಸೂರ್ಯನಾರಾಯಣ ದೇವರಿಗೆ ಗ್ರಾಮಸ್ಥರು ದಿಗ್ಭಂಧನ ಹಾಕಿದ್ದಾರೆ. ತೀವ್ರ ಬರಗಾಲದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಲ್ಲದೆ ಬೆಳೆ ಬೆಳೆಯಲು, ಕುಡಿಯಲು ನೀರಿಲ್ಲದೆ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆಯಿಂದ ಗ್ರಾಮಸ್ಥರು ದೇವರ ಗರ್ಭ ಗುಡಿಯಲ್ಲಿ ನೀರು ತುಂಬಿಸಿದ್ದಾರೆ.

blg dhigbhandana 1

ದೇವಸ್ಥಾನದ ಗರ್ಭಗುಡಿಗೆ ನೀರು ತುಂಬಿ ಮಳೆಗಾಗಿ ದೇವರಿಗೆ ಗ್ರಾಮಸ್ಥರು ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ದೇಗುಲದಲ್ಲಿ ನೀರು ತುಂಬಿಸಿದ ಬಳಿಕ ಭಕ್ತರು ಹೊರಗಿನಿಂದಲೇ ದೇವರಿಗೆ ಪೂಜೆ, ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಈ ರೀತಿ ಜಲ ದಿಗ್ಬಂಧನ ಹಾಕಿ ವಿಶೇಷವಾಗಿ ದೇವರಿಗೆ ಮಳೆಗಾಗಿ ಪ್ರರ್ಥನೆ ಸಲ್ಲಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

blg dhigbhandana 3 1

Share This Article
Leave a Comment

Leave a Reply

Your email address will not be published. Required fields are marked *