Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

Districts

4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

Public TV
Last updated: May 24, 2019 10:38 pm
Public TV
Share
3 Min Read
kwr ananth kumar hegde
SHARE

ಕಾರವಾರ: ಕಳೆದ ಐದು ಬಾರಿಯೂ ಹಿಂದುತ್ವದ ಅಲೆಯಿಂದ ಜಯಗಳಿಸಿದ್ದ ಅನಂತಕುಮಾರ್ ಅವರು ಎರಡನೇ ಬಾರಿ ಮೋದಿ ಅಲೆ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.

ಹೌದು. ಉತ್ತರ ಕನ್ನಡದಲ್ಲಿ ಒಟ್ಟೂ 11,54,390 ಮತಗಳು ಚಲಾವಣೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 16,017 ಸಾವಿರ ನೋಟಾ ಮತಗಳು ಚಲಾವಣೆಯಾಗಿದೆ. ಅದರಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್‍ಕುಮಾರ್ ಅವರು 4,79,649 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ಹೆಗಡೆ 7,86,042 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಆನಂದ್ ಆಸ್ನೋಟಿಕರ್ 3,06,393 ಮತಗಳನ್ನು ಪಡೆಡು ಭಾರೀ ಸೋಲನ್ನು ಅನುಭವಿಸಿದ್ದಾರೆ.

ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ….!!!!

ನನ್ನ ಕ್ಷೇತ್ರದ ಜನತೆ, ಮತದಾರ ಪ್ರಭು ತೋರಿರುವ ಇಂತಹ ಅಗಾಧ ಔಧಾರ್ಯದ ನಂಬಿಕೆಯ ಮುಂದೆ ನಾನು ಅಕ್ಷರಶಃ ತಲೆ ಬಾಗಿದ್ದೇನೆ..!
ಈ ಗೆಲುವು ಸಂಪೂರ್ಣವಾಗಿ ನಮ್ಮ ಸಂಘಟನೆ ಹಾಗು ಪಕ್ಷದ ಸಿದ್ಧಾಂತಕ್ಕೆ ಸಲ್ಲಬೇಕು!!#ModiAagaya #DeshKaGauravModihttps://t.co/9fI9DDNZbX

— Anantkumar Hegde (@AnantkumarH) May 23, 2019

ಗೆದ್ದಿದ್ದು ಹೇಗೆ?
ಯಾವುದೇ ಅಭಿವೃದ್ಧಿ ಗೆಲ್ಲಬೇಕಾದರೇ ಪಕ್ಷದ ಕಾರ್ಯಕರ್ತರ ಶ್ರಮ ಇರಲೇ ಬೇಕು. ಆ ದಿಕ್ಕಿನಲ್ಲಿ ಹೇಳುವುದಾದರೇ ಬಿಜೆಪಿ ಕಾರ್ಯಕರ್ತರ ಶ್ರಮ ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರದಲ್ಲಿ ಹೆಚ್ಚಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಸರ್ಕಾರದ ನಿಲುವುಗಳನ್ನು, ಸಾಧನೆಗಳನ್ನು ಅನಾಯಾಸವಾಗಿ ಜನರ ಮುಂದೆ ಇಟ್ಟಿರುವುದು ಬಿಜೆಪಿಯ ಪ್ಲಸ್ ಪಾಯಿಂಟ್ ಆಗಿತ್ತು. ಇದೇ ಕಾರಣಕ್ಕೆ ಅನಂತ್‍ಕುಮಾರ್ ಅವರು ಸಲೀಸಾಗಿ ಲೋಕಸಮರವನ್ನು ಗೆದ್ದು ಮತ್ತೋಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದಾರೆ.

ಕಳೆದ ಚುನಾವಣೆಗೆ ಹೋಲಿಸಿದರೆ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಜನರೊಂದಿಗೆ ಬೆರತಿರುವುದು ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಶ್ರಮದಿಂದ ನಾಲ್ಕು ಬಿಜೆಪಿ ಶಾಸಕರನ್ನು ಗೆದ್ದಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಿದೆ. ಇದಲ್ಲದೇ ಪಕ್ಷದಲ್ಲೇ ಇದ್ದು ವಿರೋಧಿಗಳಾಗಿದ್ದ ಶಿರಸಿ ಶಾಸಕ ವಿಶ್ವೇಶ್ವರ ಭಟ್ ಕಾಗೇರಿ ಅನಂತಕುಮಾರ್ ಪರ ಪ್ರಚಾರ ಮಾಡಿರುವುದು ಸಹ ಬಿಜೆಪಿಗೆ ಗೆಲುವಿದೆ ಬುನಾದಿ ಕಲ್ಪಿಸಿಕೊಟ್ಟಿತ್ತು.

kwr ananth kumar hegde 1 1

ಆನಂದ್ ಆಸ್ನೋಟಿಕರ್ ಸೋಲಲು ಕಾರಣವೇನು?
ಹಲವು ಬಾರಿ ಪಕ್ಷ ಬದಲಾವಣೆಯಿಂದ ನಂಬಿಕೆ ಕೆಡಿಸಿಕೊಂಡಿದ್ದು. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದು ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರು ಸೋಲಲು ಮುಖ್ಯ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ದೇಶಪಾಂಡೆ ಜೊತೆ ವೈಯಕ್ತಿಕವಾಗಿ ಹೆಸರು ಕೆಡಿಸಿಕೊಂಡು ವಿರೋಧ ಮಾಡಿದ್ದು ಹಾಗೂ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವ ಬಣದಲ್ಲಿ ಹೆಚ್ಚು ಆತ್ಮೀಯವಾಗಿದ್ದು ಆಸ್ನೋಟಿಕರ್ ಅವರೊಗೆ ಸೋಲು ತಂದಿದೆ ಎನ್ನಬಹುದು. ಮೈತ್ರಿಕೂಟದ ಸಮನ್ವಯತೆ ಕಾಪಾಡಿಕೊಳ್ಳದೇ ಇರುವುದು ಹಾಗೂ ಮೂಲ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಬ್ಬರನ್ನೂ ಕಡೆಗಣಿಸಿರುವುದು, ಸ್ಪರ್ಧೆ ಸಂದರ್ಭದಲ್ಲಿ ಸ್ಥಳೀಯ ನಾಯಕರು ಇವರ ಪರ ನಿಲ್ಲದೇ ಬಹಿರಂಗವಾಗಿ ಅಸಮದಾನ ಹೊರಹಾಕಿರುವುದು ಆನಂದ್ ಆಸ್ನೋಟಿಕರ್ ಅವರಿಗೆ ಭಾರಿ ಅಂತರದಲ್ಲಿ ಸೋಲು ಅನಿಭವಿಸುವಂತೆ ಮಾಡಿದೆ.

kwr ananth kumar hegde 2

ಕ್ಷೇತ್ರವಾರು ವಿವರ:
1. ಖಾನಾಪುರ: ಬಿಜೆಪಿ-1,13,386
ಮೈತ್ರಿಕೂಟ- 25,108 ಮತ
2. ಕಿತ್ತೂರು: ಬಿಜೆಪಿ-92,339
ಮೈತ್ರಿಕೂಟ- 37,337
3. ಹಳಿಯಾಳ: ಬಿಜೆಪಿ- 81,629
ಮೈತ್ರಿಕೂಟ-39,865
4. ಕಾರವಾರ: ಬಿಜೆಪಿ- 1,13,135
ಮೈತ್ರಿಕೂಟ- 37,349
5. ಕುಮಟಾ: ಬಿಜೆಪಿ-99,609
ಮೈತ್ರಿಕೂಟ- 33,179
6. ಭಟ್ಕಳ: ಬಿಜೆಪಿ- 94,560
ಮೈತ್ರಿ ಕೂಟ- 51,290
7. ಶಿರಸಿ: ಬಿಜೆಪಿ-1,03,904
ಮೈತ್ರಿಕೂಟ-38,996
8. ಯಲ್ಲಾಪುರ: ಬಿಜೆಪಿ-84,649
ಮೈತ್ರಿಕೂಟ-43,006

anand asnotikar

ಅಂಚೆ ಮತ ವಿವರ:
ಒಟ್ಟು 3199 ಮತಗಳು ಚಲಾವಣೆಯಾಗಿದೆ. ಅದರಲ್ಲಿ ಬಿಜೆಪಿ- 2831 ಮತ, ಮೈತ್ರಿಕೂಟ-263 ಮತಗಳನ್ನು ಗಳಿಸಿದೆ.

ಸುಧಾಕರ್- 40, ನಾಗರಾಜ್ ನಾಯ್ಕ- 7, ನಾಗರಾಜ್ ಶೇಟ್- 4, ಮಂಜುನಾಥ್ ಸದಾಶಿವ- 7, ಸುನಿಲ್ ಪವಾರ್- 6, ಅನಿತಾ ಶೇಟ್- 16, ಕುಂದಾಬಾಯಿ- 7, ಚಿದಾನಂದ್- 4, ನಾಗರಾಜ್ ಶಿರಾಲಿ- 5, ಬಾಲಕೃಷ್ಣ ಪಾಟೀಲ್- 3, ಮಹ್ಮದ್ ಜಬುರುದ್ ಕತೀಬ್- 6 ಮತಗಳನ್ನು ಗಳಿಸಿದ್ದಾರೆ.

BJP celebrates its 35th foundation day

ಮೈತ್ರಿ ಕೂಟದಲ್ಲಿ ಹೊಂದಾಣಿಕೆ ಇಲ್ಲದೇ ಬಹಿರಂಗವಾಗಿ ಕ್ಷೇತ್ರದಲ್ಲಿ ನಾಯಕರು ಅಸಮಧಾನ ತೋಡಿಕೊಂಡಿರುವುದು ಹೆಚ್ಚು ಬಿಜೆಪಿಗೆ ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ಮೋದಿ ಹವ ಇರುವುದು, ಪ್ರಭಲ ಅಭ್ಯರ್ಥಿ ಎದುರಾಳಿಯಾಗಿರದೇ ಇರುವುದು ಹಾಗೂ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಲಾಭ, ಮೈತ್ರಿಕೂಟದ ಅಭ್ಯರ್ಥಿ ಪರ ದೇಶಪಾಂಡೆ ಸೇರಿದಂತೆ ಉಳಿದ ನಾಯಕರು ಹೆಚ್ಚು ಪ್ರಚಾರ ಮಾಡದೇ ಅಸಮಧಾನ ಹೊರಹಾಕಿದ್ದು ಅನಂತ್‍ಕುಮಾರ್ ಅವರಿಗೆ ಮತ್ತೊಮ್ಮೆ ವಿಕ್ಟರಿ ತಂದುಕೊಟ್ಟಿದೆ.

TAGGED:Anand Asnotikarananthkumar hegadebjpcongressjdskarwarLoksabha election resultPublic TVUttara Kannadaಅನಂತ್‍ಕುಮಾರ್ ಹೆಗಡೆಆನಂದ್ ಆಸ್ನೋಟಿಕರ್ಉತ್ತರ ಕನ್ನಡಕಾರವಾರಪಬ್ಲಿಕ್ ಟಿವಿಲೋಕಸಭಾ ಚುನಾವಣೆ ಫಲಿತಾಂಶ
Share This Article
Facebook Whatsapp Whatsapp Telegram

Cinema news

Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories

You Might Also Like

Jharkhand Ranchi Air Ambulence Crash
Latest

ಜಾರ್ಖಂಡ್‌ನ ರಾಂಚಿಯಲ್ಲಿ ಏರ್ ಅಂಬುಲೆನ್ಸ್ ಪತನ

Public TV
By Public TV
1 hour ago
ICC Mens T20 World Cup West Indies vs Zimbabwe West Indies won by 107 runs
Cricket

ಸಿಕ್ಸರ್‌, ಬೌಂಡರಿಯಿಂದಲೇ ವಿಂಡೀಸ್‌ಗೆ 178 ರನ್‌ – ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ

Public TV
By Public TV
1 hour ago
big bulletin 23 February 2026 part 1
Big Bulletin

ಬಿಗ್‌ ಬುಲೆಟಿನ್‌ 23 February 2026 ಭಾಗ-1

Public TV
By Public TV
2 hours ago
big bulletin 23 February 2026 part 2
Big Bulletin

ಬಿಗ್‌ ಬುಲೆಟಿನ್‌ 23 February 2026 ಭಾಗ-2

Public TV
By Public TV
2 hours ago
big bulletin 23 February 2026 part 3
Big Bulletin

ಬಿಗ್‌ ಬುಲೆಟಿನ್‌ 23 February 2026 ಭಾಗ-3

Public TV
By Public TV
2 hours ago
Double Decker Bus Overturns In Lucknow
Crime

ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ – ಐವರು ದುರ್ಮರಣ, 16 ಮಂದಿಗೆ ಗಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?