Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷ

Public TV
Last updated: May 18, 2019 3:21 pm
Public TV
Share
2 Min Read
KPL SWAMIJI
SHARE

ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಕೊಪ್ಪಳ ಜಿಲ್ಲೆಯ ಅಳವಂಡಿಯ ಉಜ್ಜಯನಿಪೀಠದ ಸಿದ್ದೆಶ್ವರ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಯವರು ತಾನು ಪ್ರೀತಿಸಿದ ಹುಡುಗಿಗಾಗಿ ಪೀಠ ತ್ಯಾಗ ಮಾಡಿದ್ದರು. ಅಲ್ಲದೆ ಜನವರಿಯಿಂದ ಕಾಣೆಯಾಗಿದ್ದು, ಯಾರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಈಗ ಸಿದ್ದೇಶ್ವರ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷವಾಗಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಮಠದ ಮಂಡಳಿ ಕಳೆದ ವಾರವಷ್ಟೇ ಸಿದ್ದವೀರ ಸ್ವಾಮೀಜಿ ಅವರನ್ನು ಗುಪ್ತವಾಗಿ ನೇಮಿಸಿದ್ದರು. ಈ ಸಂದರ್ಭದಲ್ಲೇ ಹಳೆ ಸ್ವಾಮೀಜಿ ಸಿದ್ದೇಶ್ವರ ಮಠದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.

kpl swamiji

ಈ ಬಗ್ಗೆ ಸಿದ್ದೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾನು ಪೀಠದಲ್ಲಿದ್ದಾಗ ನನಗೆ ಹೆಚ್ಚು ತೋಳಲಾಟ ಹಾಗೂ ಸಮಸ್ಯೆಗಳು ಆಗುತ್ತಿತ್ತು. ಮಠದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆ ವಿರೋಧಿಸಿದ್ದಕ್ಕೆ ನನ್ನ ಕುಟುಂಬಸ್ಥರೇ ನನಗೆ ಕಿರುಕುಳ ನೀಡುತ್ತಿದ್ದರು. ಈ ಮಠದಲ್ಲಿ ನಾನು ನೋಡೋದಕ್ಕೆ ಸ್ವಾಮೀಜಿ ಅಷ್ಟೇ. ಆದರೆ ನನಗೆ ಯಾವುದೇ ರೀತಿಯ ಅಧಿಕಾರ ಹಾಗೂ ಸ್ವಾತಂತ್ರ್ಯ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

KPL SWAMIJI 2

ಅಲ್ಲದೆ ನನ್ನ ದೊಡ್ಡಪ್ಪ ಗುರುಮೂರ್ತಿಸ್ವಾಮಿ ಆಸ್ತಿ ಸಲುವಾಗಿ ನನಗೆ ವಿಪರೀತ ಕಿರುಕುಳ ನೀಡುತ್ತಿದ್ದರು. ದೊಡ್ಡಪ್ಪ ಸಸಿ ಹಚ್ಚುವ ಜಾಗಕ್ಕೂ ತಗಾದೆ ತೆಗೆದು ಗೆರೆ ಹಾಕಿದ್ದರು. ಬೆಟ್ಟದೂರಲ್ಲಿ 11 ಎಕರೆ ಜಾಗ ಭಕ್ತರು ಕೊಟ್ಟದ್ದು, ದಾನದ ಜಾಗದ ಮಾಲೀಕತ್ವಕ್ಕೂ ವಿವಾದ ನಡೆದಿದೆ. ದೊಡ್ಡಪ್ಪ ಹಾಗೂ ಅವರ ಕುಟುಂಬ ಇಡೀ ಮಠವನ್ನೇ ಖಾಸಗಿಯಾಗಿ ಬಳಸುತ್ತಿದ್ದಾರೆ. ಕಮಿಟಿಯಲ್ಲಿ ಕುಟುಂಬದ ಎಂಟು ಜನ ಇದ್ದಾರೆ. ಗ್ರಾಮಸ್ಥರು ಒಬ್ಬರೂ ಇಲ್ಲ. ಇದನ್ನು ವಿರೋಧಿಸಿದೆ ಎಂದು ಮಾಜಿ ಸ್ವಾಮೀಜಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?

kpl love swamiji

ಇಂತಹ ಮಾನಸಿಕ ಕಿರುಕುಳ ಹಾಗೂ ಕುಗ್ಗುಸುವಿಕೆ ಕೆಲಸದಿಂದ ನಾನು ಬೇಸತ್ತು ಹೋಗಿದ್ದೆ. ದೊಡ್ಡಪ್ಪ ಒತ್ತಾಯಪೂರ್ವಕವಾಗಿ ನನ್ನಿಂದ ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಮುಂಡರಗಿ ಕಾಲೇಜಿನಲ್ಲಿ ಪಾಠ ಮಾಡಲು ಹೋದಾಗ ಹುಡುಗಿ ನನ್ನನ್ನ ಪ್ರೀತಿಸಿದ್ದು ನಿಜ. ಇದನ್ನೇ ನೆಪ ಮಾಡಿಕೊಂಡು ದೊಡ್ಡಪ್ಪ ಮತ್ತು ಕುಟುಂಬದವರು ಸಾಕಷ್ಟು ಕಿರುಕುಳ ಕೊಟ್ಟು ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಪೀಠತ್ಯಾಗಕ್ಕೂ ಮೊದಲು ಜನರಿಗೆ ತಿಳಿಸೋಣ ಎಂದರೂ ಭೀತಿ ಹುಟ್ಟಿಸಿ, ಓಡಿಸಿದ್ದರು ಎಂದು ಸಿದ್ದೇಶ್ವರ ಸ್ವಾಮೀಜಿ ತಮ್ಮ ಅಳಲುತೋಡಿಕೊಂಡಿದ್ದಾರೆ.

TAGGED:koppalalovemuttPublic TVswamijiಕೊಪ್ಪಳಪಬ್ಲಿಕ್ ಟಿವಿಪ್ರತ್ಯಕ್ಷಪ್ರೀತಿಮಠಸ್ವಾಮೀಜಿ
Share This Article
Facebook Whatsapp Whatsapp Telegram

You Might Also Like

11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
23 minutes ago
Hubballi Reels
Dharwad

ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

Public TV
By Public TV
33 minutes ago
CRIME
Crime

ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

Public TV
By Public TV
46 minutes ago
Heavy Rain
Belgaum

ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
By Public TV
1 hour ago
Temba Bavuma 2
Cricket

ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

Public TV
By Public TV
1 hour ago
Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?