Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

Bengaluru City

ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

Public TV
Last updated: March 13, 2019 3:38 pm
Public TV
Share
3 Min Read
LAXMAN PHOTO
SHARE

– ಲಂಡನಿನಲ್ಲೇ ಕುಳಿತು ಕೊಲೆಗೆ ವರ್ಷಿಣಿ ಸ್ಕೆಚ್
– ಕಾಲ್ಸ್ ವಿವರಗಳ ಮೂಲಕ ಹತ್ಯೆಯ ರಹಸ್ಯ ಪತ್ತೆ

ಬೆಂಗಳೂರು: ವಾಟ್ಸಪ್‍ಗೆ ಗೆಳತಿ ವರ್ಷಿಣಿ ಕಳುಹಿಸಿದ ಫೋಟೋ ನೋಡಿ ಹೋಟೆಲ್‍ನಿಂದ ಹೊರ ಬಂದು ರೌಡಿ ಲಕ್ಷ್ಮಣ್ ಕೊಲೆಯಾಗಿದ್ದಾನೆ.

ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದಾನೆ.

ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ ಕೆಲವೇ ಕ್ಷಣಗಳಲ್ಲಿ ಕೊಲೆಯಾಗಿ ಹೋಗಿದ್ದ.

LAXMAN copy

ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದ. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದಾನೆ. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದಾರೆ. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

ರೂಮ್‍ಬುಕ್ ಏಕೆ?
ಆರೋಪಿ ವರ್ಷಿಣಿ ಹೋಟೆಲ್ ಬುಕ್ ಮಾಡು ನಿನ್ನ ಜೊತೆ ಎರಡು ದಿನ ಇರುತ್ತೇನೆ ಎಂದು ಲಕ್ಷ್ಮಣ್‍ಗೆ ಹೇಳಿದ್ದಳು. ನಮ್ಮ ಅಪ್ಪ-ಅಮ್ಮನದು ಮದುವೆ ವಾರ್ಷಿಕೋತ್ಸವ ಇದೆ. ನಿನ್ನ ಜೊತೆ ಎರಡು ದಿನ ಇದ್ದು ಬಳಿಕ ಮನೆಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಎಂದಿದ್ದಳು. ಅಷ್ಟೇ ಅಲ್ಲದೇ ಆರ್.ಆರ್.ನಗರ ಅಥವಾ ಬೆಂಗಳೂರು ಹೊರವಲಯದಲ್ಲಿ ರೂಮ್ ಮಾಡುವಂತೆ ಹೇಳಿದ್ದಳು. ಆಗ ಲಕ್ಷ್ಮಣ್ ಆ ಭಾಗದಲ್ಲಿ ನನಗೆ ಪರಿಚಯದವರು ಇದ್ದಾರೆ ಎಂದು ಅಲ್ಲಿ ರೂಮ್‍ಬುಕ್ ಮಾಡಲು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 6ರಂದು ಆರ್.ಜಿ ರಾಯಲ್ಸ್ ಹೋಟೆಲ್‍ಗೆ ಲಕ್ಷ್ಮಣ್ ಹೋಗಿದ್ದಾನೆ. ಆದರೆ ಅಂದು ರೂಮ್ ಸಿಗದೇ ಇದ್ದ ಕಾರಣ ವಾಪಸ್ ಹೋಗಿದ್ದಾನೆ. ಬಳಿಕ ಮಾರನೇ ದಿನ ಬಂದು ರೂಮ್ ಬುಕ್ ಮಾಡಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದ.

CCB ROWDY LASHMAN 1

ಆರೋಪಿಗಳು ತಪ್ಪೊಪ್ಪಿಗೆ:
ನಾನು 10 ಲಕ್ಷ ಹಣ ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಕೇಸ್ ದಾಖಲಿಸಿ ಲಕ್ಷ್ಮಣ್ ಜೈಲಿಗೆ ಕಳುಹಿಸಿದ್ದ. ನಂತರ ವರ್ಷಿಣಿ ವಿಚಾರಕ್ಕೆ ಪೊಲೀಸ್ ಠಾಣೆಗೆ ಬಂದು ಅವಾಜ್ ಕೂಡ ಹಾಕಿದ್ದನು. ಇದರಿಂದ ಜೈಲಿಗೆ ಹೋದಾಗ ಅಲ್ಲಿಯೇ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಮಾಡಿದ್ದೆ. ಅಷ್ಟೇ ಅಲ್ಲದೆ ಲಕ್ಷ್ಮಣ್ ನಮ್ಮ ಲವ್ ಬ್ರೇಕ್ ಮಾಡಲು ಪ್ರಯತ್ನ ಮಾಡಿದ್ದನು. ನಾನು ಜೈಲಿನಿಂದ ಹೊರಗಡೆ ಬಂದಾಗ ಮತ್ತೆ ವರ್ಷಿಣಿಯ ಫೋನ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದೆ. ಆಗ ವರ್ಷಿಣಿ ಲಂಡನ್‍ನಲ್ಲಿದ್ದಳು. ನಾನ್ ಫೋನ್ ಮಾಡಿ ಮಾತನಾಡಿದ್ದೆ.

ನಮ್ಮ ಲವ್ ಬ್ರೇಕ್‍ಅಪ್ ಆಗಿದ್ದಕ್ಕೆ ಅವಳು ಬೇಜಾರ್ ಮಾಡಿಕೊಂಡಿರಲಿಲ್ಲ. ಈ ವೇಳೆ ಅವಳು ಏನಾದರೂ ಮಾಡಿ ಲಕ್ಷ್ಮಣ್ ಗೆ ಬುದ್ಧಿ ಕಲಿಸಬೇಕು ಎಂದು ಹೇಳಿದ್ದಳು. ಅವಳಿಗೂ ಲಕ್ಷ್ಮಣನ ಮೇಲೆ ಕೋಪ ಇತ್ತು. ಅದಕ್ಕೆ ನನಗೆ ಸಪೋರ್ಟ್ ಮಾಡಿದ್ದಳು. ಇತ್ತ ನನಗೆ ಲಕ್ಷ್ಮಣ್ ಕೊಟ್ಟಿದ್ದ ಟಾರ್ಚರ್ ನಿಂದ ನಾನು ಕೊಲೆಗೆ ಸ್ಕೆಚ್ ಹಾಕಿದ್ದೆ. ನಾನು ವರ್ಷಿಣಿಗೆ ಫೋನಿನಲ್ಲೆ ಪ್ಲಾನ್ ಬಗ್ಗೆ ತಿಳಿಸಿದ್ದೆ ಎಂದು ಸಿಸಿಬಿ ಪೊಲೀಸರ ಬಳಿ ಎ1 ಆರೋಪಿ ರೂಪೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

vlcsnap 2019 03 13 09h23m41s237

ಕಾಲ್ ರೆಕಾರ್ಡಿಂಗ್ ಪತ್ತೆ:
ರೂಪೇಶ್ ಮತ್ತು ವರ್ಷಿಣಿ ಸಂಭಾಷಣೆಯ ಫೋನ್ ಕಾಲ್ಸ್ ಪತ್ತೆಯಾಗಿದ್ದು, ಇಬ್ಬರು ಲಕ್ಷ್ಮಣ್‍ನ ಹತ್ಯೆ ಬಗ್ಗೆ ಮಾತನಾಡಿರುವುದು ರೆಕಾರ್ಡ್ ಆಗಿದೆ. ವಾಟ್ಸಪ್ ಕಾಲ್ ಹಾಗೂ ನಾರ್ಮಲ್ ಕಾಲ್ ವಿವರಗಳ ಮೂಲಕ ಕೊಲೆಯ ರಹಸ್ಯ ಪತ್ತೆಯಾಗಿದೆ. ವರ್ಷಿಣಿಯನ್ನ ಮುಂದೆ ಬಿಟ್ಟು ಕೊಲೆ ಮಾಡಿದ್ದ ಸಂಚು ಆಡಿಯೋದಲ್ಲಿ ಬಹಿರಂಗವಾಗಿದೆ. ಸದ್ಯಕ್ಕೆ ಪೊಲೀಸರು ಕಾಲ್ ಡಿಟೇಲ್ಸ್ ಇಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ .

ನಾನು ಲಂಡನ್‍ಗೆ ಬಂದ ನಂತರ ರೂಪೇಶ್ ಕರೆ ಮಾಡಿದ್ದನು. ಲಕ್ಷ್ಮಣ್ ಮುಗಿಸುವ ಬಗ್ಗೆ ಪ್ರಸ್ತಾಪಿಸಿದ್ದನು. ಲಂಡನ್‍ನಲ್ಲಿ ಇದ್ದುಕೊಂಡೆ ನಾನು ಹೇಳಿದ್ದಂತೆ ಮಾಡಬೇಕು ಎಂದಿದ್ದನು ಎಂದು ಸಿಸಿಬಿ ಮುಂದೆ ಆರೋಪಿ ವರ್ಷಿಣಿ ಕೊಲೆಗೆ ಸಹಕಾರ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

TAGGED:bengaluruccbinvestigationLaxmanMurderpolicePublic TVRupeeshVarshiniಕೊಲೆತನಿಖೆಪಬ್ಲಿಕ್ ಟಿವಿಪೊಲೀಸ್ಬೆಂಗಳೂರುರೂಪೇಶ್ಲಕ್ಷ್ಣಣ್ವರ್ಷಿಣಿಸಿಸಿಬಿ
Share This Article
Facebook Whatsapp Whatsapp Telegram

Cinema news

bigg boss kannada 12 finalists
Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?
Cinema Latest Main Post TV Shows
BBK 12
ಬಿಗ್‌ಬಾಸ್ ವಿನ್ನರ್‌ಗೆ 370000000 ವೋಟ್ – ಗೆಲ್ಲೋದ್ಯಾರು?
Latest Top Stories TV Shows
Narayana Gowda
BBK 12 | ಅಶ್ವಿನಿ ಗೌಡ ಪರ ನಾರಾಯಣ ಗೌಡ, ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಬ್ಯಾಟಿಂಗ್‌
Bengaluru City Cinema Districts Karnataka Latest Main Post TV Shows
Gilli Rakshita Raghu Kavya
ಬಿಗ್‌ ಬಾಸ್‌ ಸ್ಪರ್ಧಿಗಳ ಪರ ರಾಜಕೀಯ ನಾಯಕರ ಮತಯಾಚನೆ – ಯಾರಿಗೆ ಯಾರ ಬೆಂಬಲ?
Bengaluru City Cinema Districts Karnataka Latest Mandya Top Stories TV Shows Udupi

You Might Also Like

trump maga
Latest

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಪ್ಲ್ಯಾನ್‌ಗೆ ವಿರೋಧ – ಡೆನ್ಮಾರ್ಕ್, ಯುಕೆ, ಫ್ರಾನ್ಸ್ ಮೇಲೆ 10% ಸುಂಕ ವಿಧಿಸಿದ ಟ್ರಂಪ್‌

Public TV
By Public TV
1 hour ago
Tiger Sere
Chamarajanagar

ಚಾಮರಾಜನಗರ | ತಾಯಿ ಹುಲಿ ಜೊತೆ ಮರಿಗಳು ಕಾಣಿಸಿಕೊಂಡಿದ್ದ ಪ್ರಕರಣ – 10 ತಿಂಗಳ ಮರಿ ಸೆರೆ

Public TV
By Public TV
1 hour ago
karwar women suicide case psi suspend
Latest

JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌; ಕದ್ರಾ ಠಾಣೆ PSI ಅಮಾನತು

Public TV
By Public TV
2 hours ago
Young woman dies treated by nurse compounder in Chikkamagaluru
Chikkamagaluru

ಚಿಕ್ಕಮಗಳೂರು | ಮರ ಬಿದ್ದು ಗಾಯಗೊಂಡ ಯುವತಿಗೆ ನರ್ಸ್, ಕಾಂಪೌಂಡರ್‌ನಿಂದ ಚಿಕಿತ್ಸೆ – ಶಿವಮೊಗ್ಗಕ್ಕೆ ಸಾಗಿಸುವಾಗ ಸಾವು

Public TV
By Public TV
2 hours ago
Fish 65
Food

ಥಟ್ ಅಂತಾ ಮಾಡಿ ಫಿಶ್ ಕಬಾಬ್!

Public TV
By Public TV
10 hours ago
Smriti Mandhana
Cricket

ಸೋಲೇ ಇಲ್ಲ ಗೆಲುವೇ ಎಲ್ಲಾ – ಆರ್‌ಸಿಬಿಗೆ ಸತತ 4ನೇ ಜಯ; ಮಂಧಾನಗೆ ಸೆಂಚುರಿ ಜಸ್ಟ್‌ ಮಿಸ್‌!

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?