ವಿನಾಕಾರಣ ಥಳಿಸಿ ವಿದ್ಯಾರ್ಥಿಗಳಿಗೆ ಹಿಂಸೆ- ಶಿಕ್ಷಕಿಯ ವರ್ಗಾವಣೆ

Public TV
1 Min Read
MYS 3

ಮೈಸೂರು: ವಿನಾಕಾರಣ ಥಳಿಸಿ ಹಿಂಸೆ ಕೊಡುತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಪೋಷಕರು ಪಟ್ಟು ಹಿಡಿದು ವರ್ಗ ಮಾಡಿಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಗೀತಾ ಗಾಯಿತ್ರಿ ವರ್ಗಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳಿಗೆ ಗೀತಾಗಾಯಿತ್ರಿ ಮನಬಂದಂತೆ ಥಳಿಸಿದ್ದರು. ಈ ವಿಚಾರವಾಗಿ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿ ಶಿಕ್ಷಕಿಯನ್ನ ಬೇರೆಡೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿದ್ರು.

vlcsnap 2018 08 04 13h30m32s77

ವರ್ಗಾವಣೆ ಮಾಡದಿದ್ದಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಇಓ ಶಾಲೆಗೆ ಭೇಟಿ ಕೊಟ್ಟ ವಿಚಾರಣೆ ನಡೆಸಿದ ವೇಳೆ ಗೀತಾಗಾಯಿತ್ರಿ ಹಲ್ಲೆ ಮಾಡಿದ್ದು ರುಜುವಾತಾಗಿತ್ತು. ಕೂಡಲೇ ಬಿಇಓ ರವರು ಉಪನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *