ಕೊಪ್ಪಳ: ಮಹಿಳೆಯೊಬ್ಬರ ಕೈಯಿಂದ ಟಗರು ಖರೀದಿ ಮಾಡಿ ಖೋಟಾ ನೋಟು ನೀಡಿ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಶಹಪೂರ ಗ್ರಾಮದ ಯಲ್ಲಮ್ಮ ಅವರೇ ವಂಚನೆಗೊಳಗಾದ ಮಹಿಳೆ. ಇವರು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ಸಂತೆಗೆ ಕಂಬಳಿ ಟಗರು ಮಾರಾಟ ಮಾಡಲು ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಖದೀಮರು ಮಹಿಳೆಯ ಕೈಯಿಂದ ಎರಡು ಟಗರುಗಳನ್ನು ಖರೀದಿ ಮಾಡಿದ್ದಾರೆ.
ಟಗರು ಖರೀದಿಸಿದ ಮಹಿಳೆಗೆ 2 ಸಾವಿರ ಮುಖ ಬೆಲೆಯ ಐದು ಖೋಟಾ ನೋಟು ನೀಡಿ ಅಲ್ಲಿಂದ ಬೈಕ್ ಏರಿ ಕಾಲ್ಕಿತ್ತಿದ್ದಾರೆ. ಖದೀಮರು ಅಲ್ಲಿಂದ ತೆರಳಿದ ಬಳಿಕ ಮಹಿಳೆಗೆ ತನ್ನ ಕೈಗೆ ಸಿಕ್ಕಿರುವುದು ನಕಲಿ ನೋಟು ಎಂಬುದು ಬಯಲಾಗಿದೆ.
ಸದ್ಯ ಘಟನೆ ಸಂಬಂಧ ಯಲ್ಲಮ್ಮ ಮುನಿರಾಬಾದ್ ಠಾಣೆಗೆ ದೂರು ನೀಡಿದ್ದಾರೆ.