Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಪ್ಪನ ಕೋಟೆಯಲ್ಲಿ ಮೆರೆದವ ಕೊನೆಗೂ ಜೈಲುಪಾಲು: ಎರಡು ಕೋರ್ಟ್ ಕಲಾಪ ಹೀಗಿತ್ತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅಪ್ಪನ ಕೋಟೆಯಲ್ಲಿ ಮೆರೆದವ ಕೊನೆಗೂ ಜೈಲುಪಾಲು: ಎರಡು ಕೋರ್ಟ್ ಕಲಾಪ ಹೀಗಿತ್ತು

Bengaluru City

ಅಪ್ಪನ ಕೋಟೆಯಲ್ಲಿ ಮೆರೆದವ ಕೊನೆಗೂ ಜೈಲುಪಾಲು: ಎರಡು ಕೋರ್ಟ್ ಕಲಾಪ ಹೀಗಿತ್ತು

Public TV
Last updated: February 21, 2018 9:29 pm
Public TV
Share
3 Min Read
nalapad jail bang
SHARE

ಬೆಂಗಳೂರು: ಫರ್ಜಿ ಕೆಫೆಯಲ್ಲಿ ಅಟ್ಟಹಾಸ ಮೆರೆದಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಕೊನೆಗೂ ಜೈಲು ಸೇರಿದ್ದಾನೆ. ಕಳೆದೆರಡು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ನಲಪಾಡ್ ಮತ್ತು ಆತನ 6 ಸಹಚರರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶ ಮಹೇಶ್ ಬಾಬು ಈ ಆದೇಶ ಹೊರಡಿಸುತ್ತಲೇ ಕಟಕಟೆಯಲ್ಲಿ ನಿಂತಿದ್ದ ನಲಪಾಡ್ ಗಳಗಳನೆ ಕಣ್ಣೀರಿಟ್ಟದ್ದಾನೆ. ಆದೇಶ ಹೊರಬಿದ್ದ ಕೂಡಲೇ ನಲಪಾಡ್ ಹಾಗೂ ಆತನ ಸಹಚರರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದರು. ನ್ಯಾಯಾಲಯದ ಆದೇಶದಂತೆ ನಲಪಾಡ್ ಹಾಗೂ ಆತನ ಸ್ನೇಹಿತರು ಮಾರ್ಚ್ 7 ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಲಿದ್ದಾರೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

nalpad case 4

ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಮಧ್ಯಂತರ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ನಲಪಾಡ್ ಪ್ರಕರಣ ಸಂಬಂಧ ಶ್ಯಾಂ ಸುಂದರ್ ರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸುವಂತೆ ವಿದ್ವತ್ ತಂದೆ ಲೋಕನಾಥ್ ರಾಜ್ಯ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಎನ್‍ಎ ಹ್ಯಾರೀಸ್ ಮಗನನ್ನು ನೋಡಲು ಭೇಟಿ ನೀಡಿಲ್ಲ. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

8ನೇ ಎಸಿಎಂಎಂ ನ್ಯಾಯಾಯದಲ್ಲಿ ಕಲಾಪ ಹೀಗಿತ್ತು:
ನಗರದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಮಹೇಶ್ ಬಾಬು ಅವರ ಸಮ್ಮುಖದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರು ಹಾಗೂ ಆರೋಪಿ ನಲಪಾಡ್ ಪರ ವಕೀಲರು ನ್ಯಾಯಮೂರ್ತಿಗಳ ಮುಂದೇ ತಮ್ಮ ವಾದ ಮಂಡಿಸಿದರು.

ಕೋರ್ಟ್‍ನಲ್ಲಿದ್ದ ವಕೀಲರು – ಕೋರ್ಟ್ ಹಾಲ್‍ನಲ್ಲಿ ಬರೀ ಗೂಂಡಾಗಳೇ ತುಂಬಿದ್ದಾರೆ. ಪೊಲೀಸರಿಗೆ ಕೂಡಲೇ ಎಲ್ಲರನ್ನೂ ಹೊರಗೆ ಕಳುಹಿಸಲು ಸೂಚಿಸಿ ಎಂದರು. ವಕೀಲರ ಮನವಿಯಂತೆ ಕೋರ್ಟ್ ಹಾಲ್ ನಿಂದ ಆರೋಪಿಗಳನ್ನು ಹೊರತು ಪಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದರು.

ಸರ್ಕಾರಿ ಪರ ವಕೀಲರು – ಕೇಸ್ ಇನ್ನೂ ಪ್ರಾಥಮಿಕ ವಿಚಾರಣೆ ಹಂತದಲ್ಲಿದೆ. ಹಲ್ಲೆಗೊಳಗಾದ ವ್ಯಕ್ತಿಯ ಮೂಳೆಗಳು ಮುರಿದಿವೆ. ಇದು ಸಿಸಿಟಿವಿಯ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಆರೋಪಿಗಳು ಆಸ್ಪತ್ರೆಗೂ ತೆರಳಿ ಹಲ್ಲೆಗೆ ಯತ್ನಿಸಿದ್ದಾರೆ. ಜಾಮೀನು ಮಂಜೂರು ಮಾಡಬೇಡಿ.

ನ್ಯಾಯಾಧೀಶರು – ಇನ್ನೂ ಹೇಳುವುದು ಏನಾದರೂ ಇದೆಯಾ ?
ಸರ್ಕಾರಿ ಪರ ವಕೀಲರು – ನಲಪಾಡ್ ಅಂಡ್ ಗ್ಯಾಂಗ್ ಸುಖಾಸುಮ್ಮನೆ ಹಲ್ಲೆ ಮಾಡಿಲ್ಲ. ವಿದ್ವತ್‍ರನ್ನು ಪ್ರಚೋದನೆ ಮಾಡಿ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೂ ನುಗ್ಗಿ ಹಲ್ಲೆ ಮಾಡಿದ್ದಾರೆ. ಆರೋಪಿಗಳು ಕೂಡ ಕೊಲೆ ಮಾಡಲು ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸರ್ಕಾರಿ ಪರ ವಕೀಲರು – ವಿದ್ವತ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ನಮಗೆ ಆಕ್ಷೇಪಣೆ ಸಲ್ಲಿಸಲು ನಾಳೆಯವರೆಗೂ ಅವಕಾಶ ನೀಡಿ.

ನ್ಯಾಯಾಧಿಶರು – ಓಕೆ.. ಆಕ್ಷೇಪಣೆ ಸಲ್ಲಸಲು ನಿಮಗೆ ನಾಳೆಯವರೆಗೆ ಕಾಲಾವಕಾಶ ನೀಡುತ್ತಿದ್ದೇವೆ.
ನ್ಯಾಯಾಧೀಶರು – ನಲಪಾಡ್ ಮತ್ತು ಇತರೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗುತ್ತಿದೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!

CENTRAL JAIL NALAPAD 3

ಸಿಟಿ ಸಿವಿಲ್ ಕೋರ್ಟ್ ಕಲಾಪ ಹೀಗಿತ್ತು:
ನಲಪಾಡ್ ಪರ ವಕೀಲರು ಸಲ್ಲಿಸಿದ್ದ ಜಾಮಿನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ನ್ಯಾಯಾಲಯದಲ್ಲಿ ವಿದ್ವತ್ ತಂದೆ ಸಹ ಹಾಜರಿದ್ದರು.

ಉದ್ಯಮಿ ಅಲಂಪಾಶಾ ಪರ ವಕೀಲ – ಆಡಳಿತಾರೂಢ ಪಕ್ಷದ ಶಾಸಕರ ಪುತ್ರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಸರ್ಕಾರ ಪರ ಇದ್ದಾರೆ. ವಾದ ಮಂಡಿಸುತ್ತಿರುವ ವಕೀಲರು ಸರ್ಕಾರ ಪರ ಇದ್ದಾರೆ. ಹೀಗಾಗಿ ಜನಸಾಮಾನ್ಯರ ಪರವಾಗಿ ನಮ್ಮ ವಾದ ಮಂಡಿಸಲು ಅವಕಾಶ ನೀಡಿ.

ನ್ಯಾಯಾಧೀಶರು – ಜಾಮೀನು ಅರ್ಜಿಯಲ್ಲಿ ಸೆಕ್ಷನ್ 307 ಉಲ್ಲೇಖವಿಲ್ಲ. ಅರ್ಜಿ ತಿದ್ದುಪಡಿ ಮಾಡಿ.
ನಲಪಾಡ್ ಪರ ವಕೀಲ– ಅರ್ಜಿ ತಿದ್ದುಪಡಿ ಮಾಡಿ 307 ಸೆಕ್ಷನ್ ಸೇರಿಸಿ ನಂತರ ತಿದ್ದುಪಡಿ ಪತ್ರ ಸಲ್ಲಿಸಿದರು.

ವಿದ್ವತ್ ತಂದೆ – ನಲಪಾಡ್ ಜಾಮೀನು ಅರ್ಜಿ ವೇಳೆ ನನ್ನ ವಾದವನ್ನು ಸಹ ಪರಿಗಣಿಸಿ ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದರು.
ನ್ಯಾಯಾಧೀಶರು – ಅಲಂಪಾಶಾ, ವಿದ್ವತ್ ತಂದೆಯ ಅರ್ಜಿಯನ್ನು ವಿಚಾರಣೆ ವೇಳೆ ಪರಿಗಣಿಸಬೇಕೋ, ಅಥವಾ ಬೇಡವೋ ಎಂಬ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಶುಕ್ರವಾರ ಜಾಮೀನು ಅರ್ಜಿ ಕೈಗೆತ್ತಿಕೊಳ್ಳಲಾಗುವುದು. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

https://www.youtube.com/watch?v=p8o_3v5-ZYs

https://www.youtube.com/watch?v=XE5CFfnOvx0

https://www.youtube.com/watch?v=RtMFKdQtfME

CENTRAL JAIL NALAPAD 4

CENTRAL JAIL NALAPAD 5

CENTRAL JAIL NALAPAD 6

NALAPAD 1

 

TAGGED:bail applicationbengalurucourthearingjudicial custodynalapadPublic TVvidvatಜಾಮೀನು ಅರ್ಜಿನಲಪಾಡ್ನ್ಯಾಯಾಂಗ ಬಂಧನನ್ಯಾಯಾಲಯಪಬ್ಲಿಕ್ ಟಿವಿಬೆಂಗಳೂರುವಿಚಾರಣೆವಿದ್ವತ್
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

Ashok Pattana
Bengaluru City

ಇಕ್ಬಾಲ್ ಹುಸೇನ್‌ಗೆ ಸ್ವಲ್ಪ ಮೆಚ್ಯೂರಿಟಿ ಕಡಿಮೆ ಇದೆ – ಅಶೋಕ್ ಪಟ್ಟಣ

Public TV
By Public TV
2 minutes ago
mahashivratri 2024 Kedige Flower Why Ketaki Flower is Not Offered to Lord Shiva
Districts

ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ?

Public TV
By Public TV
14 minutes ago
COURT
Latest

ಸೇವೆಯಲ್ಲಿರುವ ನ್ಯಾಯಾಧೀಶರ ವಿರುದ್ಧ 8,630 ದೂರು ದಾಖಲು: ಕಾನೂನು & ನ್ಯಾಯ ಸಚಿವಾಲಯ ಮಾಹಿತಿ

Public TV
By Public TV
19 minutes ago
Blessing Muzarabani
Cricket

T20 World Cup | ಆರ್‌ಸಿಬಿ ವೇಗಿಯ ಬೆಂಕಿ ಬೌಲಿಂಗ್‌ ದಾಳಿಗೆ ಆಸ್ಟ್ರೇಲಿಯಾ ಛಿದ್ರ

Public TV
By Public TV
31 minutes ago
Zimbabwe 1
Cricket

19 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ – T20 ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಜಿಂಬಾಬ್ವೆ

Public TV
By Public TV
37 minutes ago
Amit shah
Latest

ಫೆ.21ಕ್ಕೆ ಅಸ್ಸಾಂಗೆ ಅಮಿತಾ ಶಾ – ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಗೆ ಭೇಟಿ

Public TV
By Public TV
40 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?