ಮೈಸೂರು: ದಸರಾ ಗಂದಧಗುಡಿ ಸ್ಟಾರ್ ನೈಟ್ ನ ಶುಕ್ರವಾರ ಮುಖ್ಯ ಆಕರ್ಷಣೆಯಾಗಿದ್ದು ನಟ ದರ್ಶನ್. ದರ್ಶನ್ ಸ್ಟೇಜ್ ಮೇಲೆ ಬರ್ತಿದ್ದ ಹಾಗೆ ಅಭಿಮಾನಿಗಳು, ಯುವಕರು ಹುಚ್ಚೆದ್ದು ಕುಣಿದರು.
ಈ ವೇಳೆ ದರ್ಶನ್ ಸಿನಿಮಾದಲ್ಲಿ ಯಾವ ಹೀರೋಗಳು ಯಾರಿಗೂ ಕೌಂಟರ್ ಕೊಡಲ್ಲ. ರೈಟರ್ ಬರೆದುಕೊಟ್ಟಿದ್ದನ್ನು ನಾವು ಹೇಳ್ತಿವಿ. ಡೈರಕ್ಟರ್ ಚೆನ್ನಾಗಿ ಬರುವಂತೆ ಡೈಲಾಗ್ ಗಳನ್ನು ಬರೆಸಿರುತ್ತಾರೆ. ನಾವು ಆ ಡೈಲಾಗ್ ಚೆನ್ನಾಗಿದೆ ಅಂತಾ ಹೇಳುತ್ತೇವೆ. ನಮಗೆ ನಿಜವಾಗಲೂ ಬೇರೆ ಯಾರೋ ಈ ರೀತಿಯ ಡೈಲಾಗ್ ಹೇಳಿರುವ ಬಗ್ಗೆ ಗೊತ್ತಿರುವುದಿಲ್ಲ ಎಂದು ದರ್ಶನ್ ಅಭಿಮಾನಿಗಳಿಗೆ ಸ್ಪಷ್ಟಣೆ ನೀಡಿದರು.
ಇನ್ನು ತುಪ್ಪದ ಬೆಡಗಿ ರಾಗಿಣಿ ಸ್ಟೆಪ್ಸ್ ಹಾಕಿ ಮನರಂಜಿಸಿದರೆ ಹರ್ಷಿಕಾ ಪೂಣಚ್ಚ ಸಖತ್ ಡ್ಯಾನ್ಸ್ ಮಾಡಿದರು. ಸಾಧು ಕೋಕಿಲ ಸಿಎಂ ಸಿದ್ದರಾಮಯ್ಯಗೆ ಒಳಿತು ಮಾಡು ಮನುಷ ಹಾಡನ್ನು ಅರ್ಪಣೆ ಮಾಡಿದರು. ಸೃಜನ್ ಲೋಕೇಶ್, ಆದಿತ್ಯ, ದಿಗಂತ್, ಧೃವ ಸರ್ಜಾ ಸೇರಿದಂತೆ ಸ್ಟಾರ್ ನಟರು ಭಾಗವಹಿಸಿದರು.
Take a look at the entertaining performance by the popular artists during the #YuvaDasara that happened @ #NammaMysuru.
–#Dasara2017 #Mysore pic.twitter.com/lXdzo1OkHU
— Mysuru Dasara 2019 (@MysuruDasara) September 29, 2017
A few glimpses from the entertaining performance by the #RedBullTourBus and team during the #YuvaDasara.
– #MysuruDasara2017 #Mysuru #Mysore pic.twitter.com/OyFFRav8BD
— Mysuru Dasara 2019 (@MysuruDasara) September 28, 2017