ಸಬ್ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಓರ್ವನ ಬಂಧನ

Public TV
1 Min Read
CKD KAIDI ARREST 1

ಬೆಳಗಾವಿ: ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕೈದಿ ನೀತಿನ್ ಜಾದವ್ ನನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ನಿತೀನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 7 ಕಳ್ಳತನ ಪ್ರಕರಣಗಳ ದಾಖಲಾಗಿವೆ.

ಮೂಲತಃ ನಿತೀನ್ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ನಿವಾಸಿಯಾಗಿದ್ದಾನೆ. ಶನಿವಾರ ಬೆಳಗಿನ ಜಾವ ಚಿಕ್ಕೋಡಿ ಸಬ್ ಜೈಲಿನ ಗೋಡೆಯ ಕಲ್ಲು ಕಿತ್ತುಹಾಕಿ ನಿತೀನ್ ಸೇರಿದಂತೆ ಇನ್ನಿಬ್ಬರು ಎಸ್ಕೇಪ್ ಆಗಿದ್ದರು. ನಾಪತ್ತೆಯಾಗಿರುವ ಕೈದಿಗಳಾದ ಅಶೋಕ ಭೋಸಲೆ ಮತ್ತು ಶರದ್ ಪವಾರಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CKD KAIDI ARREST 9

CKD KAIDI ARREST 8

CKD KAIDI ARREST7

CKD KAIDI ARREST 6

CKD KAIDI ARREST 5

CKD KAIDI ARREST4

CKD KAIDI ARREST 3

CKD KAIDI ARREST 2

Share This Article
Leave a Comment

Leave a Reply

Your email address will not be published. Required fields are marked *