ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

Public TV
1 Min Read
KRISHNA ASTAMI

ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. 5 ಸಾವಿರ ವರ್ಷಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ನಾನಾ ಅವತಾರಗಳನ್ನು ತಾಳಿದ್ದನಂತೆ. ಭೂಮಿಗೆ ಬಂದು ಭಕ್ತರನ್ನ ಹರಿಸಿ ಹೋಗಿದ್ನಂತೆ. ಇದೇ ನಂಬಿಕೆ ಮೇಲೆ ಇವತ್ತಿಗೂ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನ ಮನೆ ಮನೆಯಲ್ಲೂ ಆಚರಿಸಲಾಗ್ತಿದೆ.

ಇಂದು ಜನ್ಮಾಷ್ಠಮಿ ಆಗಿರೋದ್ರಿಂದ ಶ್ರೀಕೃಷ್ಣ ಮತ್ತೆ ಭೂಮಿಗೆ ಬರ್ತಾನೆ ಅನ್ನೋ ನಂಬಿಕೆಯಿದೆ. ಮನೆ ಮನೆಯಲ್ಲೂ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಪೂಜೆ ಸಲ್ಲಿಸುವ ವಾಡಿಕೆಯಿದೆ.

ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲೂ ಈಗಾಗಲೇ ನಾನಾ ಬಗೆಯ ಕಾರ್ಯಕ್ರಮಗಳು, ಪೂಜೆಗಳು ಜೋರಾಗಿ ನಡೆಯುತ್ತಿದೆ. ಇಸ್ಕಾನ್‍ನಲ್ಲಿ ಭಕ್ತರಿಗೆ ನೀಡಲು 2 ಲಕ್ಷ ಲಾಡುಗಳು ತಯಾರಾಗಿವೆ. ಸಾವಿರಾರು ಭಕ್ತರು ಬರೋದ್ರಿಂದ ರಾಜಾಜಿನಗರ ಸುತ್ತಾಮುತ್ತಾ ಸಂಚಾರ ವ್ಯತ್ಯಯವಾಗಲಿದ್ದು ಪೊಲೀಸರು ಬದಲಿ ಮಾರ್ಗ ಅನುಸರಿಸಲು ಸೂಚಿಸಿದ್ದಾರೆ.

ಆದ್ರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಇಂದು ಆಚರಿಸಲಾಗುತ್ತಿಲ್ಲ. ಬದಲಾಗಿ ಸೆಪ್ಟೆಂಬರ್ 14ಕ್ಕೆ ಅಷ್ಟಮಿಯನ್ನು ಅಚರಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಕರಾವಳಿಯಲ್ಲಿ ಆಷಾಢ ಇರೋದ್ರಿಂದ ಇಲ್ಲಿ ಅಷ್ಟಮಿ ಇರೋದಿಲ್ಲ. ಹೀಗಾಗಿ ಇಂದು ಅಷ್ಟಮಿಯ ಆಚರಣೆ ಕೃಷ್ಣನೂರು ಉಡುಪಿಯಲ್ಲಿ ಇಲ್ಲ. ಶ್ರೀಕೃಷ್ಣನಿಗೆ ಜನ್ಮ ಇಲ್ಲ. ಅವನು ಅವತಾರವೆತ್ತಿದ್ದು ಎಂಬುವುದು ಭಾಗವತದಲ್ಲಿ ಉಲ್ಲೇಖವಿದೆ. ಇಂದು ಹಬ್ಬ ಆಚರಿಸುವವರು ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಇರುವುದರಿಂದ ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.

KRISHNA 5

KRISHNA 4

KRISHNA 3

KRISHNA 2

KRISHNA 1

Share This Article
Leave a Comment

Leave a Reply

Your email address will not be published. Required fields are marked *