ರಾಯಚೂರು: ತೆಲುಗು ಚಲನಚಿತ್ರ ನಟ ರಾಮ್ ಚರಣ್ ಧರ್ಮಪತ್ನಿ ಹಾಗೂ ಅಪೋಲೋ ಆಸ್ಪತ್ರೆಯ ಸಿಎಸ್ಆರ್ನ ಉಪಾಧ್ಯಕ್ಷೆಯಾಗಿರುವ ಉಪಾಸನಾ ಕೊನಿಡೇಲ (Upasana Konidela) ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಮೊದಲಿಗೆ ಗ್ರಾಮ ದೇವತೆ ಮಂಚಾಲಮ್ಮ ಹಾಗೂ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ನಂತರ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಫಲಮಂತ್ರಾಕ್ಷತೆ, ಪರಿಮಳ ಪ್ರಸಾದ ನೀಡಿ ಆಶೀರ್ವದಿಸಿದರು.

ಉಪಾಸನಾ ಕೊನಿಡೇಲ ಅವರ ಜೊತೆಗೆ ಮಂತ್ರಾಲಯ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ಮತ್ತು ನಿರ್ಗತಿಕರಿಗೆ ಉತ್ತಮ ಆರೋಗ್ಯ ಬೆಂಬಲವನ್ನು ಒದಗಿಸಲು, ಮಂತ್ರಾಲಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸುವ ಅಗತ್ಯತೆಯ ಕುರಿತು ಶ್ರೀಗಳು ಚರ್ಚಿಸಿದರು. ಇದನ್ನೂ ಓದಿ: ಆಟ ಆಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕ – ಐಸಿಯುನಲ್ಲಿ ಚಿಕಿತ್ಸೆ

