ಬೆಂಗಳೂರು: ಹರ್ ಘರ್ ತಿರಂಗಾ(Har Ghar Tiranga) ಅಭಿಯಾನವನ್ನು ದೇಶಾದ್ಯಂತ ನಡೆಸಲು ಮುಂದಾಗಿರುವ ಬಿಜೆಪಿಯು(BJP) ಮೊದಲು ತನ್ನ ವೈಚಾರಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ದೇಶದ ಜನತೆಗೆ ವಿವರಿಸಲಿ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯಾನಂತರ ಐದು ದಶಕಗಳಿಗೂ ಹೆಚ್ಚು ಕಾಲ ಆರ್ಎಸ್ಎಸ್ನ(RSS) ನಾಗಪುರದ ಕೇಂದ್ರ ಕಚೇರಿಯಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸಲಿಲ್ಲ. 1947ರ ಆಗಸ್ಟ್ 15 ಹಾಗೂ 1950ರ ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ನಂತರ 52 ವರ್ಷಗಳ ಅಂತರದ ಬಳಿಕ 2002ರ ಜನವರಿ 26ರಂದು ಆರ್ಎಸ್ಎಸ್ನ ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಮತ್ತೆ ಹಾರಿಸಲಾಯಿತು ಎಂಬುದನ್ನು ಐತಿಹಾಸಿಕ ವರದಿಗಳು ದಾಖಲಿಸಿವೆ.
ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು. ತನ್ನ ವೈಚಾರಿಕ ಮಾತೃಸಂಸ್ಥೆ ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜಕ್ಕೆ ಏಕೆ ಆದ್ಯತೆ ನೀಡಿತು? ಸ್ವಾತಂತ್ರ್ಯಾನಂತರ ಇಷ್ಟು ದೀರ್ಘಕಾಲ ತನ್ನದೇ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಏಕೆ ಕಾಣಿಸಲಿಲ್ಲ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
The BJP should begin its #HarGharTiranga campaign at the RSS headquarters.
For over five decades after Independence, the RSS did not hoist the Indian National Flag at its Nagpur headquarters. The Tricolour was officially hoisted only in 2002.
Before lecturing every Indian on…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 13, 2026
ರಾಷ್ಟ್ರಧ್ವಜವು ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಇಂತಹ ರಾಷ್ಟ್ರಧ್ವಜದ ಬಗ್ಗೆ ದೇಶಭಕ್ತಿಯ ಉಪದೇಶ ನೀಡುವವರು ತಮ್ಮದೇ ಸಂಘಟನೆಯ ಹಿಂದಿನ ನಿಲುವು ಮತ್ತು ಆಚರಣೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಪೂರ್ಣ ಸಮವಸ್ತ್ರದಲ್ಲಿ, ಕೈಯಲ್ಲಿ ಹೆಮ್ಮೆಯಿಂದ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಸ್ವಯಂಸೇವಕರನ್ನು ಒಳಗೊಂಡ ಎಷ್ಟು ಆರ್ಎಸ್ಎಸ್ ಪಥಸಂಚಲನಗಳನ್ನು ನೀವು ನೋಡಿದ್ದೀರಿ? ಈ ಪ್ರಶ್ನೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಉತ್ತರಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಆರ್ಎಸ್ಎಸ್ನ ರಾಷ್ಟ್ರಧ್ವಜ ಕುರಿತ ಹಿಂದಿನ ನಿಲುವು ಹಲವು ವರ್ಷಗಳಿಂದ ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಯ ವಿಷಯವಾಗಿದೆ. 2002ರಲ್ಲಿ ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ 52 ವರ್ಷಗಳ ಬಳಿಕ ತ್ರಿವರ್ಣ ಧ್ವಜ ಹಾರಿಸಿದ ಘಟನೆ ಆ ಕಾಲದಲ್ಲೇ ವ್ಯಾಪಕವಾಗಿ ವರದಿಯಾಗಿತ್ತು.
ದೇಶಭಕ್ತಿಯ ಪ್ರಮಾಣಪತ್ರಗಳನ್ನು ಇತರರಿಗೆ ನೀಡುವ ಮೊದಲು, ದೇಶದ ರಾಷ್ಟ್ರಧ್ವಜದ ಬಗ್ಗೆ ತಮ್ಮದೇ ಸಂಘಟನೆಯ ಇತಿಹಾಸವನ್ನು ಬಿಜೆಪಿ ಜನರಿಗೆ ಸ್ಪಷ್ಟಪಡಿಸಲಿ. ದೇಶಭಕ್ತಿ ಎನ್ನುವುದು ಕೇವಲ ಘೋಷಣೆ ಅಥವಾ ಪ್ರಚಾರದ ವಿಷಯವಲ್ಲ; ಅದು ರಾಷ್ಟ್ರದ ಸಂವಿಧಾನ ಮತ್ತು ರಾಷ್ಟ್ರಧ್ವಜ ಸೇರಿದಂತೆ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ತೋರಿಸುವ ಗೌರವದಲ್ಲೂ ವ್ಯಕ್ತವಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೊದಲು ಆರ್ಎಸ್ಎಸ್ ಕೇಂದ್ರ ಕಚೇರಿಯಿಂದಲೇ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿ; ನಂತರ ದೇಶದ ಜನರಿಗೆ ದೇಶಭಕ್ತಿಯ ಪಾಠ ಹೇಳಿ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
