ರಾಜ್ಯಾದ್ಯಂತ ಮುಂದಿನ 7 ದಿನಗಳ ಮಳೆ ಮುಂದುವರಿಯಲಿದ್ದು, ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತಗೊಂಡ ಪರಿಣಾಮ ಕರಾವಳಿ, ದಕ್ಷಿಣ ಪ್ರದೇಶಗಳ ಬಹುತೇಕ ಕಡೆ ಇಂದು ಮತ್ತು ನಾಳೆ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಜೊತೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಅಲ್ಲಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 32-22
ಮಂಗಳೂರು: 32-27
ಶಿವಮೊಗ್ಗ: 34-24
ಬೆಳಗಾವಿ: 33-24
ಮೈಸೂರು: 33-23

ಮಂಡ್ಯ: 33-23
ಮಡಿಕೇರಿ: 29-22
ರಾಮನಗರ: 34-23
ಹಾಸನ: 31-22
ಚಾಮರಾಜನಗರ: 33-23
ಚಿಕ್ಕಬಳ್ಳಾಪುರ: 33-22

ಕೋಲಾರ: 33-22
ತುಮಕೂರು: 33-22
ಉಡುಪಿ: 33-28
ಕಾರವಾರ: 32-29
ಚಿಕ್ಕಮಗಳೂರು: 29-21
ದಾವಣಗೆರೆ: 35-25

ಹುಬ್ಬಳ್ಳಿ: 34-24
ಚಿತ್ರದುರ್ಗ: 34-24
ಹಾವೇರಿ: 34-25
ಬಳ್ಳಾರಿ: 37-26
ಗದಗ: 34-24
ಕೊಪ್ಪಳ: 36-26

ರಾಯಚೂರು: 38-28
ಯಾದಗಿರಿ: 39-28
ವಿಜಯಪುರ: 38-26
ಕಲಬುರಗಿ: 38-28
ಬಾಗಲಕೋಟೆ: 37-26
