ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ (Dharwad) ವರ್ಷದ ಮೊದಲ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನಿಂದ ಕಂಗೆಟ್ಟಿದ ಜನತೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ.
ಧಾರವಾಡದಲ್ಲಿ ಮಂಗಳವಾರ ತಡರಾತ್ರಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಹೋಳಿ ಹುಣ್ಣಿಮೆ ನಂತರ ಮಳೆರಾಯನ ಆಗಮನವಾಗುವುದು ಸಹಜ. ಅದೇ ರೀತಿ ಮಂಗಳವಾರ ತಡರಾತ್ರಿ ಧಾರವಾಡಕ್ಕೆ ಮಳೆರಾಯನ ಆಗಮನವಾಗಿದೆ. ಇದನ್ನೂ ಓದಿ: ದಿನದ ಖರ್ಚಿಗೆ 5,000 ರೂ.ಗೆ ಡಿಮ್ಯಾಂಡ್ – ಪತ್ನಿಯಿಂದ ನಿತ್ಯ ಕಿರುಕುಳ, ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ
ಜನರು ಈ ಮಳೆಯನ್ನು ಕಾಮಣ್ಣ ಕಣ್ಣೀರು ಎಂದು ನಂಬುತ್ತಾರೆ. ಕಾಮಣ್ಣನ ದಹನದ 5 ದಿನಗಳಲ್ಲಿ ಮಳೆ ಬಂದರೆ ಅದು ಕಾಮಣ್ಣನ ಕಣ್ಣೀರು ಎಂದು ಇಲ್ಲಿನ ಜನರು ಭಾವಿಸುತ್ತಾರೆ. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್ನಲ್ಲಿ ಏನಿರುತ್ತೆ?