ಬೇರೇ ಹೀರೋಗಳಿಗೆ ಟಾಂಟ್ ಮಾಡಬೇಡಿ: ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ರಿಯಾಕ್ಷನ್

Public TV
2 Min Read
sudeep 3

ಟ ಸುದೀಪ್ (Sudeep) ಅವರು ‘ಮ್ಯಾಕ್ಸ್’ (Max) ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆ ‘ಮ್ಯಾಕ್ಸ್’ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಸ್ಟಾರ್ಸ್ ಫ್ಯಾನ್ಸ್ ವಾರ್ ಜಾಸ್ತಿ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಬೇರೇ ಹೀರೋಗಳು ನನ್ನ ಸಹಕಲಾವಿದರು ಅವರಿಗೆ ಟಾಂಟ್ ಕೊಡೋದು ಮಾಡಬೇಡಿ ಎಂದು ನಟ ಹೇಳಿದ್ದಾರೆ.

Kiccha Sudeep Max Pre Release Chitradurga 1

ನಾವು ಹೇಳೋದ್ರಿಂದ ಅವರು ಕೇಳೋ ಹಾಗೆ ಇದಿದ್ರೆ, ವಾರ್ ಅಂತಾ ನೀವೇನು ಹೇಳ್ತಿದ್ದೀರಾ, ಅದು ಯಾರು ಮಾಡ್ತಿದಾರೆ ಅಂತ ಗೊತ್ತಾಗಲ್ಲ. ನಮ್ಮ ಫ್ಯಾನ್ಸ್‌ಗಳು ಮಾಡ್ತಿದ್ದಾರಾ? ಬೇರೆ ಅವರ ಫ್ಯಾನ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ. ಯಾರ್ ಯಾರೋ ತಂದು ಹಾಕೋಕೆ ಮಾಡಬಹುದು. ಅದು ನಮಗೆ ಗೊತ್ತಾಗಲ್ಲ ಎಂದಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

sudeep 1 1

ಸಿನಿಮಾ ಮಾಡಬೇಕು ಅನ್ನೋದು ಏಕಾಗ್ರತೆ ಇದೆ. ಪ್ರತಿಯೊಬ್ಬ ಕಲಾವಿದರಿಗೂ ಅದೇ ಇರೋದು. ನಾನು ನನ್ನ ಅಭಿಮಾನಿಗಳಿಗೆ ಹೇಳುತ್ತೇನೆ. ಬೇರೇ ಹೀರೋಗಳು ನನ್ನ ಸಹ ಕಲಾವಿದರು ಅವರೆಲ್ಲಾ ಹಾಗಾಗಿ ಅವರ ಬಗ್ಗೆ ಟಾಂಟ್ ಕೊಡೋದು ಮಾಡಬೇಡಿ. ನಮ್ಮ ಸಿನಿಮಾ ಹೊಗಳುವ ಭರದಲ್ಲಿ ಬೇರೇ ಅವರ ಜೊತೆ ಕಂಪೇರ್ ಮಾಡಿ ಮಾತನಾಡೋದು ಬೇಡ ಎಂದು ಫ್ಯಾನ್ಸ್‌ಗೆ ಹೇಳುತ್ತೇನೆ. ಮಿಕ್ಕಿದ ಫ್ಯಾನ್ಸ್‌ಗೆ ಅವರವರ ಹೀರೋಗಳು ನೋಡ್ಕೊಬೇಕು ಎಂದು ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ಅಂದಹಾಗೆ, ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿ, ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್ ಕೊಡಲ್ಲ, ಯಾಕೆ ಕೊಡಬೇಕು ಎಂದು ಹೇಳಿದರು. ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಸುದೀಪ್, ‘ಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರು’ ಕೇಕ್ ಕಂಟ್ರವರ್ಸಿಗೆ ಕ್ಲ್ಯಾರಿಟಿ ನೀಡಿದರು.

ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್ ಕೊಡಬೇಕು ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್‌ಗೂ ಏನು ಇಲ್ಲ ಸರ್. ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದರು.

ಟಾಂಟ್ ಯಾಕ್ ಕೊಡ್ಬೇಕು ನಾವು.. ನಾವೇನು ಚಕ್ರವರ್ತಿಗಳಾ..? ಸಿನಿಮಾ ಮಾಡೋಣ ಖುಷಿ ಪಡೋಣ ಅಷ್ಟೇ. ಯಾರಿಗೆ ಟಾಂಗ್ ಕೊಡ್ತಾರೋ..? ಯಶ್‌ಗೆ ಯಶ್ ಬಾಸ್ ಅಂತಾ ಕರಿಯೊಲ್ವಾ..? ಧ್ರುವಗೆ ಧ್ರುವ ಬಾಸ್ ಅಂತಾ ಕರಿಯಲ್ವಾ? ಶಿವಣ್ಣಗೆ ಶಿವಣ್ಣ ಬಾಸ್ ಅಂತಾ ಕರಿಯಲ್ವಾ? ಉಪ್ಪಿ ಬಾಸ್ ಅಂತಾ ಕರಿಯಲ್ವಾ..? ಒಂದು ಸಿನಿಮಾ ಹಿಟ್ ಆದಾಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋಣ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸೋಣ. ನಾನು ನಮ್ ತಂದೆಗೆ ಬಾಸ್ ಅಂತಾ ಕರಿಯೋದು.. ಕನ್ನಡ ಚಿತ್ರರಂಗ ಮುಖ್ಯನಾ..? ನಾನು ಮುಖ್ಯನಾ..? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುದೀಪ್ ಹೇಳಿದ್ದರು.

Share This Article