Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್

Bengaluru City

ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್

Public TV
Last updated: December 28, 2024 8:39 pm
Public TV
Share
3 Min Read
Chikkaballapura 7
SHARE

– ಮರ್ಡರ್ ಮಾಡಿ ಹೂತಿಟ್ಟ, ಮತ್ತೆ ಪೆಟ್ರೋಲ್ ಹಾಕಿ ಸುಟ್ಟು, ಕೆರೆಗೆ ಬೂದಿ ಬಿಸಾಡಿದ್ದ
– ಕೆರೆಯಲ್ಲಿ ಸಿಕ್ತು ಮೂಳೆ, ಒಂದೊಂದು ಹಂತವೂ ರೋಚಕ

ಚಿಕ್ಕಬಳ್ಳಾಪುರ: ʻಸ್ನೇಹ ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ, ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಹೂರ್ತ ಇಡ್ತಾರೋʼ ಅನ್ನೋ ಜೋಗಿ ಸಿನಿಮಾದ ಸಾಂಗ್‌ನ ಸಾಲುಗಳನ್ನ ಕೇಳೇ ಇರ್ತೀರಾ. ಸೇಮ್ ಟು ಸೇಮ್ ಇಲ್ಲೂ ಜೊತೆಯಲ್ಲೇ ಇದ್ದುಕೊಂಡೇ ಸ್ನೇಹಿತನ ಕೊಲೆ ಮಾಡಿಬಿಟ್ಟಿದ್ದಾನೆ ಭೂಪ.

ಕೊಲೆ ಪ್ರಕರಣ ಮುಚ್ಚಿ ಹಾಕೋಕೆ ದೃಶ್ಯಂ ಸಿನಿಮಾ ಶೈಲಿಯಲ್ಲಿ (Drishyam Cinema) ಹತ್ತಾರು ಪ್ಲ್ಯಾನ್‌ಗಳನ್ನ ಮಾಡಿದ್ದಾನೆ. ಆದ್ರೂ ಗ್ರಹಚಾರ ಕೆಟ್ಟು ಮಾಡಿದ್ದುಣ್ಣೋ ಮಹರಾಯ ಅಂತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ. ಇನ್ನೂ ಸ್ನೇಹಿತನನ್ನೇ ಕೊಲೆ ಮಾಡಿರೋವನ ಹೆಸರು ರಾಜ್‍ಕುಮಾರ್ ಅಂತ ಕೊಲೆಯಾದವನು ದೇವರಾಜ್.

Chikkaballapura 3 2

ಇವರಿಬ್ಬರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ನಿವಾಸಿಗಳು, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ದೇವರಾಜ್ ವಾಸವಾಗಿದ್ರೆ ರಘುನಾಥಪುರದಲ್ಲಿ ರಾಜ್ ಕುಮಾರ್ ವಾಸವಾಗಿದ್ದ. ಬಹಳಷ್ಟು ವರ್ಷಗಳಿಂದ ಪರಿಚಯವಾಗಿದ್ದ ಇಬ್ಬರು ಸ್ನೇಹಿತರಾಗಿ ಜೊತೆಯಾಗಿಯೇ ದೆಹಲಿಯಿಂದ ಸೆಕೆಂಡ್ ಹ್ಯಾಂಡ್ ಕಾರು ತಂದು ಮಾರಾಟ ಮಾಡ್ತಿದ್ರು. ಇನ್ನೂ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಸೇರಿದಂತೆ ಚೀಟಿ ವ್ಯವಹಾರಗಳನ್ನ ನಡೆಸುತ್ತಿದ್ರು. ಹಣಕಾಸು ವಿಚಾರದಲ್ಲಿ ಚೆನ್ನಾಗಿಯೇ ಇದ್ದ ದೇವರಾಜ್ ಬಳಿ ರಾಜ್ ಕುಮಾರ್ ಲಕ್ಷಾಂತರ ರೂಪಾಯಿ ಸಾಲ ಪಡ್ಕೊಂಡಿದ್ದ. ಲಕ್ಷ ಲಕ್ಷ ಸಾಲ ಮಾಡಿದ್ದ, ಅಲ್ಲದೇ ಚೀಟಿ ವ್ಯವಹಾರ ಸಹ ಮಾಡಿ ಆ ಹಣವನ್ನ ಸಹ ದೇವರಾಜ್‌ಗೆ ವಾಪಸ್ ಕೊಟ್ಟಿರಲಿಲ್ಲವಂತೆ, ಹೀಗಾಗಿ ಸ್ನೇಹ ಸಂಬಂಧದಲ್ಲಿ ಬಿರುಕು ಮೂಡಿತ್ತು. ಪದೇ ಪದೇ ದೇವರಾಜ್ ಕರೆ ಮಾಡಿ ನನ್ನ ಹಣ ವಾಪಸ್ ಕೊಡುವಂತೆ ದುಂಬಾಲು ಬೀಳ್ತಿದ್ದನಂತೆ. ಇದ್ರಿಂದ ದೇವರಾಜ್ ಬದುಕಿದ್ರೆ ತಾನೇ ಹಣ ಕೇಳೋದು ಅಂತ ಕೊನೆಗೆ ಕೊಲೆನೇ ಮಾಡಿಬಿಟ್ಟಿದ್ದಾನೆ.

Chikkaballapura 2 2

ಕೊಲೆ ಮಾಡಿದ್ದು ಹೇಗೆ..?
ಅಂದಹಾಗೆ ರಾಜ್ ಕುಮಾರ್ ಕಳೆದ ಅಕ್ಟೋಬರ್‌ 17 ರಂದು ಪ್ಲ್ಯಾನ್‌ ಮಾಡಿದಂತೆ ದೇವರಾಜ್‌ಗೆ ಕರೆ ಮಾಡಿ ಬಾ ಚೀಟಿ ಹಣ ಕೊಡ್ತೀನಿ ಅಂತ ಕರೆಸಿಕೊಂಡಿದ್ದಾನೆ. ಸಹಾಯಕ್ಕಾಗಿ ಆಂಧ್ರದಿಂದ ಅನಿಲ್ ಎಂಬಾತನನ್ನ ಕರೆಸಿಕೊಂಡಿದ್ದಾನೆ. ಯುಪಿ ರಿಜಸ್ಟ್ರೇಷನ್‌ ಕಾರಲ್ಲಿ ಕೂರಿಸಿಕೊಂಡು ಹೋಗಿ ಹಿಂಬದಿ ಕೂತಿದ್ದ ರಾಜ್‌ಕುಮಾರ್ ಮುಂಬದಿ ಕೂತಿದ್ದ ದೇವರಾಜ್ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ತದನಂತರ ಮೃತದೇಹವನ್ನ ಇನ್ಫೋಸಿಸ್‌ ಖಾಸಗಿ ಬಡಾವಣೆಯ ತನ್ನದೇ ನಿವೇಶನದಲ್ಲಿ ಜೆಸಿಬಿ ಮೂಲಕ ಸಂಪು ತೆಗೆಯಬೇಕು ಅಂತ ಗುಂಡಿ ಹೊಡೆಸಿ ಅದೇ ಗುಂಡಿಗೆ ದೇವರಾಜ್ ಮೃತದೇಹ ಹಾಕಿ ಮುಚ್ಚಿ ಹಾಕಿದ್ದಾನೆ. ಇನ್ನೂ ವಾಸನೆ ಬರ್ತಿದೆ ಅಂತ ಮತ್ತೆ ತಿಂಗಳ ನಂತರ ಮೃತದೇಹವನ್ನ ಹೊರತೆಗೆದು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ. ನಂತರ ಅಳಿದುಳಿದ ಮೂಳೆ, ಬೂದಿ ಸಮೇತ ಮಧುರೆ ಕೆರೆಯಲ್ಲಿ ಬಿಸಾಡಿಬಂದಿದ್ದಾರೆ.

ಕೊಲೆ ಮಾಡಿ ಕಂಪ್ಲೇಂಟ್ ಕೊಡಿಸಿದ್ದ ಭೂಪ:
ಆರೋಪಿ ರಾಜ್‌ಕುಮಾರ್ ಕೊಲೆ ಮಾಡಿ ತನಗೇನು ಗೊತ್ತೆ ಇಲ್ಲ ಅನ್ನೋ ಹಾಗೆ ದೇವರಾಜ್ ಹೆಂಡತಿ ಮಗಳ ಜೊತೆಯಲ್ಲೇ ಬಂದು ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಡಿಸಿದ್ದ. ಆದ್ರೆ ಬರ್ತಾ ಬರ್ತಾ ರಾಜ್‍ಕುಮಾರ್ ನಡೆ ಬಗ್ಗೆ ಅನುಮಾನಗೊಂಡ ದೇವರಾಜ್ ಮನೆಯವರು ಆತನ ಬಗ್ಗೆ ಪೊಲೀಸರ ಬಳಿ ಸಂಶಯ ತೋಡಿಕೊಂಡಿದ್ರು. ಬಳಿಕ ಪೊಲೀಸರು ಕರೆಸಿ ಪೊಲೀಸ್ ಸ್ಟೈಲಲ್ಲಿ ವಿಚಾರಣೆ ಮಾಡಿದಾಗ ರಾಜ್ ಕುಮಾರ್ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ. ಕೊಲೆಗೆ ಸಹಕರಿಸದ ಅನಿಲ್ ಸಹ ಈಗ ದೊಡ್ಡಬಳ್ಳಾಪುರ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ.

ಕೆರೆಯಲ್ಲಿ ಸಿಕ್ತು ಮೂಳೆ:
ದೊಡ್ಡಬಳ್ಳಾಪುರ ಸಿಪಿಐ ಸಾಧಿಕ್ ಪಾಷಾ ನೇತೃತ್ವದ ತನಿಖಾ ತಂಡ ಸ್ಥಳ ಮಹಜರು ನಡೆಸಿತ್ತು. ಆರಂಭದಲ್ಲಿ ಹೂತಿಟ್ಟ ಜಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೋಡಿ ಅಳಿದುಳಿದ ಮೃತದೇಹದ ಅವಶೇಷಗಳಾಗಿ ಹುಡುಕಾಡಿದ್ರು. ಏನೂ ಸಿಗಲಿಲ್ಲ ಅಂತ ಆಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮಧುರೆ ಕೆರೆಯಲ್ಲಿ ಜಾಲಾಡಿಸಿ ಕೊನೆಗೆ ಮೂಳೆಗಳಿದ್ದ ಚೀಲ ಪತ್ತೆ ಹಚ್ಚಿತ್ತು ತನಿಖಾ ತಂಡ.

TAGGED:chikkaballapurChikkaballapur PoliceCold CaseDrishyam Cinemaಕೋಲ್ಡ್‌ ಕೇಸ್‌ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ ಪೊಲೀಸ್ದೃಶ್ಯಂ ಸಿನಿಮಾ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Justin Fairfax
Crime

ಪತ್ನಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ವರ್ಜೀನಿಯಾ ಮಾಜಿ ಗವರ್ನರ್‌

Public TV
By Public TV
16 minutes ago
Mango
Districts

ಬಂಜರು ಭೂಮಿಯ ಕಮಾಲ್‌ – ಒಂದು ಕೆಜಿ ಮಾವಿಗೆ 1 ಲಕ್ಷ ರೂ.

Public TV
By Public TV
23 minutes ago
shivamogga chikkamagaluru rain
Chikkamagaluru

ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್‌ ಕಂಬ, ಮರಗಳು

Public TV
By Public TV
46 minutes ago
Israel Strikes Lebanon With 100 Missiles In 10 Minutes
Latest

ಇಸ್ರೇಲ್, ಲೆಬನಾನ್ ನಡುವೆ ಅಮೆರಿಕ ಮಧ್ಯಸ್ಥಿಕೆ – 10 ದಿನಗಳ ಕದನ ವಿರಾಮ ಘೋಷಣೆ

Public TV
By Public TV
1 hour ago
Donald Trump 2
Latest

ಸಮೃದ್ಧವಾದ ಯುರೇನಿಯಂ ಹಸ್ತಾಂತರಿಸಲು ಇರಾನ್‌ ಒಪ್ಪಿದೆ: ಟ್ರಂಪ್‌

Public TV
By Public TV
1 hour ago
Bird Flu 3
Bengaluru City

ಚಿಕನ್ ಪ್ರಿಯರೇ ಎಚ್ಚರ – ರಾಜ್ಯಕ್ಕೆ ಕಾಲಿಟ್ಟಿದೆ ಹಕ್ಕಿ ಜ್ವರ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?